ಶ್ರೀ ಕ್ಷೇತ್ರ ಇಟಲಕ್ಕೆ ಕೊಡಿಮರ ಸೇವೆ:ಬೃಹತ್ ಕಾರ್ಯಕ್ರಮಕ್ಕೆ ಭರದ ಸಿದ್ಧತೆ

ಜಾಹೀರಾತು/Advertisment
ಜಾಹೀರಾತು/Advertisment


ಮೂಡುಬಿದಿರೆಯ ದರೆಗುಡ್ಡೆಯಲ್ಲಿರುವ ಮಹಾತೋಭಾರ ಶ್ರೀ ಕ್ಷೇತ್ರ ಇಟಲ ಸೋಮನಾಥೇಶ್ವರ ದೇವಾಲಯದ ಜೀರ್ಣೋದ್ಧಾರದ ನಿಮಿತ್ತ "ಕೊಡಿಮರ" (ಧ್ವಜಸ್ತಂಭ) ತರುವ ವಿಚಾರವಾಗಿ ಇಂದು ದೇವಾಲಯದ ಆವರಣದಲ್ಲಿ ಸಭೆ ನಡೆಸಲಾಯಿತು.


ಸಭೆಯಲ್ಲಿ ಕೊಡಿಮರ ತರುವ ಬಗ್ಗೆ ಹಾಗೂ ತರುವಾಗ ನಡೆಯುವ ವಿವಿಧ ಕಾರ್ಯಕ್ರಮಗಳು, ಮೆರವಣಿಗೆ, ಪ್ರಚಾರ, ಊಟೋಪಚಾರ ಹಾಗೂ ಇತರೆ ವಿಚಾರವಾಗಿ ಚರ್ಚಿಸಲಾಯಿತು


ಪಣಪಿಲ ಅರಮನೆಯ ಮುಖ್ಯಸ್ಥರಾದ ಶ್ರೀ ವಿಮಲ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಿತು. ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಸುಕೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳು, ಕೋಶಾಧಿಕಾರಿಗಳು, ಗುತ್ತು ಬರ್ಕೆಯ ಪ್ರಮುಖರು, ಗ್ರಾಮ ಸಮಿತಿಯ ಪ್ರಮುಖರು ಹಾಗೂ ಇತರೆ ಗ್ರಾಮಸ್ಥರು ಉಪಸ್ಥಿತರಿದ್ದರು

Post a Comment

0 Comments