ಜವನೆರ್ ಬೆದ್ರ ಸಂಘಟನೆಯಿಂದ ವಿಭಿನ್ನ ದೀಪಾವಳಿ:ಯೋಧ ನಮನದ ಮೂಲಕ ಹಬ್ಬ ಆಚರಣೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ದೀಪಾವಳಿ ಪ್ರಯುಕ್ತ ಮೂಡುಬಿದಿರೆಯ ಪ್ರತಿಷ್ಠಿತ ಜವನೆರ್ ಬೆದ್ರ ಯುವ ಸಂಘಟನೆಯ ವತಿಯಿಂದ ಪ್ರತಿವರ್ಷ ನಡೆಯುವ ಯೋಧ ನಮನ ಕಾರ್ಯಕ್ರಮ ಅಕ್ಟೋಬರ್ 30 ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು.

ಕೆಎಂಎಫ್ ಅಧ್ಯಕ್ಷ ಕೆ ಪಿ ಸುಚರಿತ ಶೆಟ್ಟಿ , ಬಿಜೆಪಿ ಮುಖಂಡ ಕೆ ಪಿ ಜಗದೀಶ್ ಅಧಿಕಾರಿ ,ರಾಘವೇಂದ್ರ ಪ್ರಭು, ಮಂಜುನಾಥ ರೈ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯನಿರತ ಯೋಧ ಮಹೇಂದ್ರ ಜೈನ್ ಹಾಗೂ ನಿವೃತ್ತ ಯೋಧ ರಾಜೇಂದ್ರ ಜಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಭಾರತದ ಭೂಪಟದ ಒಳಗೆ ಅಮರ್ ಜವಾನ್ ಚಿತ್ರವನ್ನ ದೀಪ ಹಚ್ಚುವುದರ ಮೂಲ ದೇಶಪ್ರೇಮದ ದೀಪಾವಳಿಯನ್ನು ಆಚರಿಸಲಾಯಿತು.

ಸಂಘಟನೆ ಅಧ್ಯಕ್ಷ ಅಮರ್ ಕೋಟೆ, ದಿನೇಶ್ ನಾಯಕ್,ನಾರಾಯಣ ಪಡುಮಲೆ, ವಿದ್ಯಾನಂದ ಶೆಟ್ಟಿ , ಪ್ರತಿಶ್, ಗೀತಾ ಆಚಾರ್ಯ,ನಾಗಶ್ರೀ ಅಕ್ಷಯ್ ಕುಮಾರ್ ಮಧುಸೂದನ್ ಸುಮಂತ್ ಚಂದ್ರಶೇಖರ್, ರಿತಿಲ್ ಪೂಜಾರಿ, ಶ್ರೀ ಗೌರಿ ಹಾಗೂ ಎಲ್ಲಾ ಸದಸ್ಯರು ಭಾಗವಹಿಸಿದ್ದರು. ಸುನೀಲ್ ಪಣಪಿಲ ಕಾರ್ಯಕ್ರಮ ನಿರ್ವಹಿಸಿದರು.

 

Post a Comment

0 Comments

Advertisement