ನಂತರ ಮಾತನಾಡಿದ ಅವರು ನಿರುದ್ಯೋಗಿಗಳಿಗೆ ಉದ್ಯೋಗವನ್ನು ಕಲ್ಪಿಸುವಂತಹ ಕೆಲಸ ಉದ್ಯೋಗಮೇಳಗಳಿಂದ ಆಗುತ್ತದೆ. ಒಂದೇ ಜಾಗಕ್ಕೆ ಹಲವು ಕಂಪನಿಗಳನ್ನು ಕರೆಸಿ ಉದ್ಯೋಗವನ್ನು ಕಲ್ಪಿಸುವಂತಹ ಕೆಲಸವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕಳೆದ 12 ವರುಷಗಳಿಂದ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ ಮತ್ತು ಈ ಸಂಸ್ಥೆಯು ನನ್ನ ಕ್ಷೇತ್ರದಲ್ಲಿರುವುದು ನನಗೆ ಹೆಮ್ಮೆ ಎಂದರು.
ಸನ್ಮಾನ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಜಯರಾಮ್ ಎಸ್.,ಮಹಮ್ಮದ್ ಅಶ್ರಫ್, ವೆಂಕಟರಮಣ ಪಿ. ಅವರನ್ನು ಸನ್ಮಾನಿಸಲಾಯಿತು.
ಅದಾನಿ ಗ್ರೂಫ್ ನ ಕಿಶೋರ್ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಪನ್ಯಾಸಕ ವೇಣುಗೋಪಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
0 Comments