ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ವಿಧೇಯಕವಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2022 ( ಮತಾಂತರ ನಿಷೇಧ ಕಾಯ್ದೆ) ಇಂದು ವಿಧಾನಪರಿಷತ್ತಿನಲ್ಲಿ ಸುದೀರ್ಘ ಚರ್ಚೆಯ ನಂತರ ಅನುಮೋದನೆಗೊಂಡಿತು. ರಾಜ್ಯದಲ್ಲಿ ಕ್ರೈಸ್ತರು ಮತ್ತು ಮುಸ್ಲಿಮರು ಹಿಂದೂ ಧರ್ಮಿಯರನ್ನು ಆಮಿಷ ವಂಚನೆ ಹಾಗೂ ಬಲವಂತವಾಗಿ ಮತಾಂತರ ಮಾಡುವ ವಿರುದ್ಧ ಈ ಕಾಯಿದೆಯು ರೂಪುಗೊಂಡಿದ್ದು ಹಿಂದಿನ ವಿಧಾನಸಭೆಯ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕೃತಗೊಂಡಿತ್ತು ಆದರೆ ಮೇಲ್ಮನೆಯಲ್ಲಿ ಬಹುಮತದ ಕೊರತೆಯಿಂದಾಗಿ ಈ ವಿಧೇಯಕವು ಅಂಗೀಕಾರವಾಗದೆ ಉಳಿದಿತ್ತು. ಇಂದು ಮಹತ್ವಾಕಾಂಕ್ಷೆಯ ಮಸೂದೆಯು ವಿಧಾನಪರಿಷತ್ತಿನಲ್ಲೂ ಅಂಗೀಕಾರಗೊಂಡಿದ್ದು ಮತಾಂತರಿಗಳಿಗೆ ಕಂಟಕವಾಗಿದೆ. ಕ್ರೈಸ್ತ ಹಾಗೂ ಮುಸ್ಲಿಮರು ಬಲವಂತವಾಗಿ ಆಮಿಷ ಒಡ್ಡಿ ಹಿಂದೂ ಧರ್ಮಿಯರನ್ನು ಮತಾಂತರ ಮಾಡುತ್ತಿದ್ದರು. ಇನ್ನುಮುಂದೆ ಇಂತಹ ಆಟಾಟೋಪಕ್ಕೆ ಕಡಿವಾಣ ಬೀಳಲಿದೆ. ವಿಧಾನಪರಿಷತ್ ಸಭಾ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಇಂದು ಧ್ವನಿ ಮತಗಳ ಮೂಲಕ ಈ ಮಸೂದೆಯನ್ನು ಅಧಿಕೃತವಾಗಿ ಅಂಗೀಕರಿಸಲಾಯಿತು.
0 Comments