ಅಂಗನವಾಡಿ ಕೇಂದ್ರ ದತ್ತು ಸ್ವೀಕಾರ

ಜಾಹೀರಾತು/Advertisment
ಜಾಹೀರಾತು/Advertisment

 

ಮುಲ್ಕಿ:  ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದರೆ ಮಂಡಲ ಮಹಿಳಾ ಮೋರ್ಚದ ವತಿಯಿಂದ ಮಾನ್ಯ ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ಆದರ್ಶ ಅಂಗನವಾಡಿ ಅಭಿಯಾನದಡಿ  ಬಳ್ಕೊಂಜೆ ಪಂಚಾಯತ್ ವ್ಯಾಪ್ತಿಯ ಕೊಲ್ಲೂರು ಗ್ರಾಮದ ಅಂಗನವಾಡಿಯನ್ನು  ಮಹಿಳಾ ಮೋರ್ಚಾದ ಅಧ್ಯಕ್ಷೆ ಶಶಿಕಲಾ ಶೆಟ್ಟಿ ಅವರ ನೇತೃತ್ವ ಹಾಗೂ ಅಧ್ಯಕ್ಷತೆಯಲ್ಲಿ ದತ್ತು ತೆಗೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ್ ಕಟೀಲ್,  ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಕರ್ಕೇರ,ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶ್ವೇತಾ ಪ್ರವೀಣ್, ಭಾರತ ಶೆಟ್ಟಿ, ಉಪಾಧ್ಯಕ್ಷರುಗಳಾದ ಸುಜಾತ ಶಾಮ್ ಕುಂದರ್, ಸರೋಜಿನಿ, ಬೇಬಿ ಕೆಮ್ಮದೇ,  ಬಳ್ಕುಂಜೆ ಪಂಚಾಯಿತಿನ ಸದಸ್ಯರಾದ ನವೀನ್ ಶೆಟ್ಟಿ, ಅಂಗನವಾಡಿ  ಕಾರ್ಯಕರ್ತೆ ವಸಂತಿ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments