ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಹಾಗೂ ಪ್ರತಿಮೆ ಲೋಕಾರ್ಪಣಾ ದಿನ ಘೋಷಿಸಿದ ಬಿರುವೆರ್ ಕುಡ್ಲ.!

ಜಾಹೀರಾತು/Advertisment
ಜಾಹೀರಾತು/Advertisment

ಮಂಗಳೂರಿನ ಹೃದಯಭಾಗದಲ್ಲಿರುವ ಲೇಡಿಹಿಲ್ ಸರ್ಕಲ್ ನ ಹೆಸರನ್ನು ಬ್ರಹ್ಮಶ್ರೀ ಗುರುನಾರಾಯಣ ಸರ್ಕಲ್ ಎಂದು ಮರುನಾಮಕರಣ ಮಾಡಿದ್ದು ಇದರ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯುಳ್ಳ  ಭವ್ಯ ವೃತ್ತದ ಕಾಮಗಾರಿಯು ಭರದಿಂದ ಸಾಗುತ್ತಿದ್ದು ಇದರ ಉದ್ಘಾಟನಾ ಸಮಾರಂಭದ ದಿನವನ್ನು ಬಿರುವೆರ್ ಕುಡ್ಲ ಸಂಘಟನೆಯು ಘೋಷಿಸಿಕೊಂಡಿದೆ. ಭರದಿಂದ ಸಾಗುತ್ತಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ವೃತ್ತದಲ್ಲಿರುವ  ಮೂರ್ತಿ ಮತ್ತು ಅದರ ಸುತ್ತಮುತ್ತಲಿನ ಕಾಮಗಾರಿಗಳ ಅಧಿಕೃತ ಉದ್ಘಾಟನೆಯು ಮಂಗಳೂರು ದಸರಾ ಸಂದರ್ಭದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದು ಬಿರುವೆರ್ ಕುಡ್ಲ ತನ್ನ ಅಧಿಕೃತ ಫೇಸ್ಬುಕ್ ಪೇಜ್ ನಲ್ಲಿ ಪ್ರಕಟಮಾಡಿದೆ.


 ಈ ವೃತ್ತದ ನಿರ್ಮಾಣ ಕಾರ್ಯವನ್ನು ಉದ್ಯಮಿ ಬಿಲ್ಡರ್ ಆಗಿರುವ ಚಂದನ್ ದಾಸ್ ಪೂಜಾರಿ, ಲಿಖಿತ್ ಕೋಟ್ಯಾನ್ ಮತ್ತು ಎಂಜಿನಿಯರ್ ಆಗಿರುವ ಪ್ರಕಾಶ್ ಅವರಿಂದ ಕಾಮಗಾರಿ ನಡೆಯುತ್ತಿದ್ದು ಅತ್ಯದ್ಭುತವಾಗಿ ಈ ವೃತ್ತವು ಮೂಡಿಬಂದಿದೆ. ದಸರಾ ಸಂದರ್ಭದಲ್ಲಿ ಈ ವೃತ್ತವು ಲೋಕಾರ್ಪಣೆಗೊಳ್ಳಲಿದ್ದು ದಸರಾಗೆ ಮತ್ತೊಂದು ಮೆರಗು ನೀಡುವುದರಲ್ಲಿ ಸಂಶಯವಿಲ್ಲ.
 

Post a Comment

0 Comments