ಬಪ್ಪನಾಡಿನಿಂದ ಮೂಡುಬಿದಿರೆ ವರೆಗಿನ 100 ಮೀಟರ್ ಉದ್ದದ ತ್ರಿವರ್ಣ ಧ್ವಜದೊಂದಿಗಿನ ಕಾಲ್ನಡಿಗೆ ಜಾಥ ಕ್ಕೆ ಬಪ್ಪನಾಡಿನಲ್ಲಿ ವೈಭವೋಪೂರಿತ ಚಾಲನೆಯನ್ನು ನೀಡಲಾಯಿತು.
ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್, ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಎ ಕೋಟ್ಯಾನ್ ಸಹಿತ ಅನೇಕ ರಾಜಕೀಯ ಧಾರ್ಮಿಕ ಹಾಗೂ ಸಾಮಾಜಿಕ ನಾಯಕರ ಮುಂದಾಳತ್ವದಲ್ಲಿ ಬೃಹತ್ ಯಾತ್ರೆಗೆ ಚಾಲನೆಯನ್ನು ನೀಡಲಾಯಿತು.
ಮೂಲ್ಕಿ, ಕಿನ್ನಿಗೋಳಿ, ಕಟೀಲು, ನಿಡ್ಡೋಡಿ, ಕಲ್ಲಮುಂಡ್ಕೂರು ಮಾರ್ಗವಾಗಿ ವಿದ್ಯಾಗಿರಿ ಮೂಲಕ ಮೂಡುಬಿದಿರೆ ತಲುಪಲಿರುವ ಈ ಬೃಹತ್ ತಿರಂಗಾ ಯಾತ್ರೆಯಲ್ಲಿ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ.
0 Comments