ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಯುವ ಕಾಂಗ್ರೇಸ್ ಅಧ್ಯಕ್ಷ ಆಗ್ರಹ

ಜಾಹೀರಾತು/Advertisment
ಜಾಹೀರಾತು/Advertisment

 

ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ, , ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ

ಪ್ರವೀಣ್ ನೆಟ್ಟಾರು ಇವರ ಅಗಲುವಿಕೆಯು ತುಂಬಾ ವಿಷಾದನೀಯ. ಅವರ ಕೊಲೆಗಡುಕರನ್ನ ಕೂಡಲೇ ಬಂಧಿಸಿ ಉಗ್ರ ಶಿಕ್ಷೆಗೆ ಒಳಪಡಿಸಬೇಕೆಂದು ಮೂಡುಬಿದಿರೆ ಬ್ಲಾಕ್ ಯುವ ಕಾಂಗ್ರೇಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಒತ್ತಾಯಿಸಿದ್ದಾರೆ.

ಕೋಮು ಸಂಘರ್ಷದಿಂದಾಗಿ ಅಮಾಯಕರ ಜೀವ ಬಲಿ ಯಾಗುತ್ತಿದ್ದು ಇದಕ್ಕೆ ಜಿಲ್ಲೆಯ ಬುದ್ಧಿವಂತ ಜನರು ಅಂತ್ಯ ಹಾಡಬೇಕಾಗಿದೆ, ರಾಜಕೀಯ ನಾಯಕರ ಉದ್ರೇಕಕಾರಿ ಭಾಷಣ ಹಾಗೂ ಡೋಂಗಿ ಹಿಂದುತ್ವವನ್ನು ಜನರು ಅರಿತುಕೊಳ್ಳಬೇಕಾಗಿದೆ.

ಬುದ್ಧಿವಂತರ ಜಿಲ್ಲೆ ಮತ್ತಷ್ಟು ಕೋಮು ಗಲಭೆಗೆ ಗುರಿಯಾಗದೆ ಶಾಂತಿ ಹಾಗೂ ಸಹಬಾಳ್ವೆಯ, ಸೌಹಾರ್ದತೆಯ ಜೀವನವನ್ನು ನಡೆಸುವಂತಾಗಬೇಕು.

ಸರಕಾರ ಅಪರಾಧಿ ಯಾರೇ ಆದರೂ ಅವರನ್ನು ತಕ್ಷಣ ಬಂಧಿಸಿ ಜನತೆಯ ಮುಂದಿಡಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಾರೆ..


Post a Comment

0 Comments