ಕಾಶಿಯಲ್ಲಿ ಕೋಲಾಹಲ: ಮಸೀದಿ ನುಗ್ಗಲು ಕೋರ್ಟ್ ಆದೇಶ! ಮಸೀದಿಯೊಳಗೆ ಏನೇನಿದೆ?

ಜಾಹೀರಾತು/Advertisment
ಜಾಹೀರಾತು/Advertisment

 ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರವು ಈಗ ಮತ್ತೆ ಸುದ್ಧಿಯಲ್ಲಿದೆ. ಇತ್ತೀಚೆಗಷ್ಟೇ ಭವ್ಯವಾದ ಕಾಶಿ ಕಾರಿಡಾರ್ ಲೋಕಾರ್ಪಣೆ ಮೂಲಕ ಸದ್ದು ಮಾಡಿದ್ದ ಕಾಶಿ ಈಗ ಮತ್ತೆ ಮಸೀದಿ ವಿಚಾರದಲ್ಲಿ ಸದ್ದು ಮಾಡುತ್ತಿದೆ.

ಕಾಶಿಯಲ್ಲಿರುವ ಗ್ಯಾನವಾಪಿ ಮಸೀದಿ ಆವರಣದಲ್ಲಿ ಶೃಂಗಾರ ಗೌರಿ, ಗಣೇಶ ಹಾಗೂ ನಂದಿ ವಿಗ್ರಹಗಳು ಇದ್ದು, ಇವುಗಳ ಪೂಜೆಗೆ ಅವಕಾಶ ನೀಡಬೇಕೆಂದು ವಾರಾಣಸಿ ಐವರು ಮಹಿಳೆಯರು ನ್ಯಾಯಾಲಯದಲ್ಲಿ ಸುಮಾರು 2 ವರ್ಷಗಳ ಹಿಂದೆ ಅರ್ಜಿಯನ್ನು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಸ್ಥಳದ ವಿಡಿಯೋ ಚಿತ್ರೀಕರಣ ಹಾಗೂ ಸಮೀಕ್ಷೆಗೆ ಆದೇಶಿಸಿತ್ತು.

 ಕಾಶಿ ವಿಶ್ವನಾಥ ಮಂದಿರದ ಪಕ್ಕದಲ್ಲಿರುವ ಗ್ಯಾನವಾಪಿ ಮಸೀದಿಗೆ ಕೋರ್ಚ್ ಕಮಿಷನರ್ ತಂಡದ ಸದಸ್ಯರು ಶನಿವಾರ ಭೇಟಿಕೊಟ್ಟಿದ್ದರು. 
ಆದರೆ ಮುಸ್ಲಿಂ ಸಮುದಾಯದ  ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸುಮಾರು 2 ಗಂಟೆಗಳ ಕಾಲ ದೇವಾಲಯದಲ್ಲೇ ಕಾದ ಅಧಿಕಾರಿಗಳು ವಿಡಿಯೋ ಚಿತ್ರೀಕರಣ ಹಾಗೂ ಸಮೀಕ್ಷೆ ನಡೆಸಲಾಗದೇ ಹಿಂತಿರುಗಿದ್ದಾರೆ. 

ಪ್ರಸ್ತುತ ಕೋರ್ಚ್ ಕಮಿಷನರ್ ಆಗಿರುವ ಅಜಯ
ಕುಮಾರ್ ಮಿಶ್ರಾ ಅವರ ಬದಲಾಗಿ ಬೇರೊಬ್ಬ ಅಧಿಕಾರಿಯನ್ನು ನೇಮಿಸುವಂತೆ ಗ್ಯಾನವಾಪಿ ಮಸೀದಿ ನಿರ್ವಹಣಾ ಸಮಿತಿಯ ಸದಸ್ಯರು ಸೇರಿದಂತೆ ಮುಸ್ಲಿಂ ಸಮುದಾಯವರು ವಾರಾಣಸಿಯ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಆಲಿಸಿದ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಅವರು ಆದೇಶವನ್ನು ಮೇ 9 ರವರೆಗೆ ಕಾಯ್ದಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋರ್ಚ್ ಮಿಶ್ರಾ ಅವರೊಂದಿಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯದ ವಕೀಲರ ತಂಡವನ್ನು ನೇಮಕ ಮಾಡಿತ್ತು. ಆದರೆ ಮುಸ್ಲಿಂ ಸಮುದಾಯದ ಪ್ರತಿಭಟನೆಯ ಹಿನ್ನೆಲೆ ದೇವಾಲಯ ಪ್ರವೇಶಿಸಿದ ಅಧಿಕಾರಿಗಳಿಗೆ ವಿಡಿಯೋ ಚಿತ್ರೀಕರಣ ಮಾಡಲು ಸಾಧ್ಯವಾಗಲಿಲ್ಲ.

Post a Comment

0 Comments