ಮೌಖಿಕ ಆದೇಶದ ಮೇಲೆ ಕಾಮಗಾರಿ ಮಾಡಬಾರದು-ಬಸವರಾಜ್ ಬೊಮ್ಮಾಯಿ

 


ಶಿವಮೊಗ್ಗ: ಪರ್ಸಂಟೇಜ್ ಅನ್ನುವಂತಹದ್ದು ಬಹಳ ವ್ಯಾಪಕವಾಗಿ ಮಾಡುವ ವಿಚಾರ. ಇದನ್ನು ನಿಯಂತ್ರಣ ಮಾಡುವುದು ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ನಡೆದಿದೆ. ಸಂತೋಷ್ ಪಾಟೀಲ್ ವಿಚಾರ ವಿಭಿನ್ನ ಪ್ರಕರಣ, ಎಸ್ಟಿಮೇಟ್ ಮಾಡುವುದರಿಂದ ಈ ಪ್ರಕರಣ ಆರಂಭವಾಗಿದೆ.ನಿವೃತ್ತ ಉನ್ನತ ಮಟ್ಟದ ಸಮಿತಿ ರಚಿಸುತ್ತೇನೆ. ಟೆಂಡರ್ ಆರಂಭಕ್ಕೂ ಮೊದಲು ಈ ತಂಡ ಕೆಲಸ ಮಾಡುತ್ತದೆ.

50 ಕೋಟಿ ರೂ. ಮೇಲ್ಪಟ್ಟ ಕಾಮಗಾರಿಗಳು ಈ ಸಮಿತಿ ಮುಂದೆ ಹೋಗುತ್ತದೆ.ಅವರು ಎಲ್ಲಾ ಪರಿಶೀಲನೆ ನಂತರ ಟೆಂಡರ್ ಪ್ರಕ್ರಿಯೆ ಆರಂಭವಾಗುತ್ತದೆ

ಮೌಖಿಕ ಆದೇಶದ ಮೇಲೆ ಕಾಮಗಾರಿ ಮಾಡಬಾರದು. ಯಾರಾದರೂ ಮಾಡಿದರೇ ಇಲಾಖೆಯ ಇಂಜಿನಿಯರ್ ಮತ್ತು ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು. ಬೆಂಗಳೂರಿನಲ್ಲಿ ಭೂ ಕಬಳಿಕೆ ವಿಚಾರ ಇದೆ. ಅಲ್ಲಿ ಭೂಮಿ ಮೌಲ್ಯ ಹೆಚ್ಚಿದ್ದು ಈ ಬಗ್ಗೆ ಭೂ ಕಬಳಿಕೆ ಹೆಚ್ಚಿದೆ ಎಂದರು.

Post a Comment

0 Comments

Advertisement