ಮೂಡುಬಿದಿರೆ: ಶ್ರೀ ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ವತಿಯಿಂದ ಡಾಕ್ಟರೇಟ್ ಪದವಿಗೆ ಪಾತ್ರರಾದ ಶ್ರೀಶಾ ಭಂಡಾರಿ ಇವರನ್ನು ಗೌರವಿಸಲಾಯಿತು.
ಪುತ್ತಿಗೆ ನಡಿಗುತ್ತುವಿನ ಉಷಾ ಶೈಲೇಂದ್ರ ದಂಪತಿಗಳ ಪುತ್ರಿ ಶ್ರೀಶಾ ಭಂಡಾರಿಯವರಿಗೆ ತೈವಾನ್ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ ಲಭಿಸಿರುವುದಕ್ಕೆ ಮೂಡುಬಿದಿರೆಯ ಪ್ರತಿಷ್ಟಿತ ಶ್ರೀ ಪಂಚಶಕ್ತಿ ಸೊಸೈಟಿಯ ವತಿಯಿಂದ ಸನ್ಮಾನಿಸಲಾಯಿತು.
ಸಹಕಾರಿಯ ಅಧ್ಯಕ್ಷರಾದ ರಂಜಿತ್ ಪೂಜಾರಿ, ಉಪಾಧ್ಯಕ್ಷರಾದ ಶ್ರೀಮತಿ ಉಷಾ, ರಮೇಶ್ ಎಸ್. ಶೆಟ್ಟಿ ಸುರೇಶ ಪೂಜಾರಿ ಎಂ., ಶಂಕರನಾರಾಯಣ ಭಟ್ , ರತ್ನಾಕರ ಪೂಜಾರಿ , ರಾಜೇಂದ್ರ ಬಿ. ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯು. ರಾಜಶೇಖರ ಮಧ್ಯಸ್ಥ ಉಪಸ್ಥಿತರಿದ್ದರು.
0 Comments