ಬೆಳ್ತಂಗಡಿ: ಪುರಾಣ ಪ್ರಸಿದ್ಧ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವವು ಅನುವಂಶಿಕ ಆಡಳಿತ ಮೊಕ್ತೇಸರರಾದ ಕೆಲ್ಲಗುತ್ತು ಸಬ್ರಬೈಲು ಕೆ. ಜಯವರ್ಮರಾಜ ಬಲ್ಲಾಳ್ ರವರ ದಕ್ಷ ನೇತೃತ್ವದಲ್ಲಿ ಫೆಬ್ರವರಿ 12 ರಿಂದ 21 ರ ತನಕ 10 ದಿನಗಳ ಕಾಲ ವೈಭಯುತವಾಗಿ ನಡೆಯಿತು
ಭಾನುವಾರ ಬೆಳಿಗ್ಗೆ ಕವಾಟೋದ್ಘಟನೆ, ಪ್ರಸನ್ನ ಪೂಜೆ, ಶ್ರೀ ದೇವರ ನಗರ ಬೀದಿ ಸವಾರಿ, ಕಟ್ಟೆ ಪೂಜೆ, ಅವಭೃತ ಸ್ನಾನ, ಧ್ವಜಾರೋಹಣ, ಧರ್ಮ ದೈವಗಳಿಗೆ ಅಂಗಣ ನೇಮ ನಡೆಯಿತು . ದೇವಸ್ಥಾನದಿಂದ ಧರ್ಮದೈವಗಳ ಭಂಡಾರವು ಹಿಂದೆ ಕೆಲ್ಲಗುತ್ತು ಮನೆಗೆ ಆಗಮನವಾಯಿತು .
ಸೋಮವಾರ ಬೆಳಗ್ಗೆ ಧರ್ಮ ದೈವಗಳ ನೇಮೋತ್ಸವ , ಸಂಪ್ರೋಕ್ಷಣೆ , ಮಂತ್ರಾಕ್ಷತೆ, ಮಹಾಪೂಜೆ ನಡೆದು 10 ದಿನಗಳ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಸಂದರ್ಭಗಳಲ್ಲಿ ಕೆಲ್ಲಗುತ್ತು , ಸಬ್ರಬೈಲು ಮನೆತನದ ಸಹೋದರ, ಸಹೋದರಿಯರು ಹಾಗೂ ಕುಟುಂಬಸ್ಥರು ಮತ್ತು ಊರ - ಪರವೂರಿನ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
0 Comments