ವಯೋವಂದನಾ ಆತಿಥ್ಯ ಗೃಹ* ' *ನಿರ್ಮಾಣ ಯೋಜನೆ ಮತ್ತು ಜಿಎಸ್‌ಬಿ ಸಾಮಾಜಿಕ ಜಾಗೃತಿ ಕಾರ್ಯಗಾರದ ಪೂರ್ವ ತಯಾರಿ ಸಭೆ* ."

ಜಾಹೀರಾತು/Advertisment
ಜಾಹೀರಾತು/Advertisment
" *ವಯೋವಂದನಾ ಆತಿಥ್ಯ ಗೃಹ* ' *ನಿರ್ಮಾಣ ಯೋಜನೆ ಮತ್ತು ಜಿಎಸ್‌ಬಿ ಸಾಮಾಜಿಕ ಜಾಗೃತಿ ಕಾರ್ಯಗಾರದ ಪೂರ್ವ ತಯಾರಿ ಸಭೆ* ."
 ಹೋಟೆಲ್ ಮಧುವನ ಸೆರಾಯಿ ಮಣಿಪಾಲದ ಮೊದಲನೇ ಮಹಡಿಯಲ್ಲಿರುವ ಮೈತ್ರಿ ಸಭಾಭವನದಲ್ಲಿ ಜುಲೈ 12 ಆದಿತ್ಯವಾರ ಸಂಜೆ 5:30 ಗಂಟೆಯಿಂದ 7:00ವರೆಗೆ ನಡೆಯಿತು.
ಜಿ ಎಸ್ ಬಿ ಸಮಾಜ ಹಿತ ರಕ್ಷಣಾ ವೇದಿಕೆಯ ಪ್ರಧಾನ ಕಾರ್ಯದರ್ಶಿ, ಸಾಣೂರು ನರಸಿಂಹ ಕಾಮತ್ ರವರು ಕಳೆದ 14 ವರ್ಷಗಳಿಂದ ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಪರಿಕಲ್ಪನೆ ಮತ್ತು ಸಂಯೋಜನೆ ಹಾಗೂ ನೇತೃತ್ವದಲ್ಲಿ ನಡೆದು ಬಂದಿರುವ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳು, ಕುಟುಂಬ ಚೈತನ್ಯ ನಿಧಿ ಆರೋಗ್ಯ ಚೈತನ್ಯ ನಿಧಿ, ವಿದ್ಯಾ ಪೋಷಕ ನಿಧಿ, ಶೈಕ್ಷಣಿಕ ದತ್ತು ಯೋಜನೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ,
ಜಿ ಎಸ್ ಬಿ ಉಚಿತ ಗೃಹ ನಿರ್ಮಾಣ ಯೋಜನೆ, ರಾಷ್ಟ್ರ ರಕ್ಷಾ ನಿಧಿ, ಉಚಿತ ಕೌಟುಂಬಿಕ ಆರೋಗ್ಯ ವಿಮಾ ಯೋಜನೆ ಮುಂತಾದ ಸಮಾಜಮುಖಿ ಕಾರ್ಯ ಯೋಜನೆಗಳ ಮಾಹಿತಿಯನ್ನು ಸವಿವರವಾಗಿ ತಿಳಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಸಂಚಾಲಕರಾದ
 ಶ್ರೀ ಆರ್. ವಿವೇಕಾನಂದ ಶೆಣೈ ಯವರು ಅಗಸ್ಟ್ ೦1 ಶನಿವಾರದಂದು ಮಣಿಪಾಲದಲ್ಲಿ ನಡೆಸಲು ಉದ್ದೇಶಿಸಿರುವ ಜಿಎಸ್‌ಬಿ ಸಾಮಾಜಿಕ ಜಾಗೃತಿ ಕಾರ್ಯಗಾರದ ಅವಶ್ಯಕತೆ ಮತ್ತು ಮಹತ್ವಗಳನ್ನು ವಿವರವಾಗಿ ತಿಳಿಸಿದರು.

ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರಿನಲ್ಲಿ ವಯೋವಂದನ ಆತಿಥ್ಯ ಗೃಹ ನಿರ್ಮಾಣ ಯೋಜನೆಯ ಕಾರ್ಯ ಪ್ರಗತಿ ಮತ್ತು ಸಾಮಾಜಿಕ ಭದ್ರತಾ ಸದುದ್ದೇಶದಿಂದ ಆರಂಭಿಸಲು ಯೋಚಿಸಿರುವ "ವಯೋವಂದನಾ ಹೆಲ್ಪ್ ಲೈನ್"
ಯೋಜನೆಯ ಮಾಹಿತಿಯನ್ನು ನೀಡಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಣಿಪಾಲದ ಖ್ಯಾತ ಇಂಜಿನಿಯರ್ ಶ್ರೀ ಕೋಟೇಶ್ವರ ಮಾಧವರಾಯ ಕಾಮತ್, ಹೋಟೆಲ್ ಮಧುವನ ಸೆರಾಯಿ ಮಾಲಕರಾದ ಶ್ರೀ ದಾಮೋದರ್ ನಾಯಕ್ ರವರು ಕ್ಯಾ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ,
 ಜಿ ಎಸ್ ಬಿ ಸಮಾಜ ಹಿತರಕ್ಷಣಾ ವೇದಿಕೆ ಕಳೆದ ಒಂದೂವರೆ ದಶಕದ ಸುಧೀರ್ಘಾವಧಿಯಲ್ಲಿ ಎಲ್ಲಾ ರೀತಿಯ ಅಡ್ಡಿ ಆತಂಕ ಸವಾಲುಗಳನ್ನು ಎದುರಿಸಿ ಇಂದು ಸಮಾಜದ ಎಲ್ಲಾ ವರ್ಗದವರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ನಡೆಸುತ್ತಿರುವ ಸಮಾಜ ಸಂಘಟನೆ ಮತ್ತು ಸಮಾಜಮುಖಿ ಕಾರ್ಯ ಗಳಿಗೆ ಸಮಾಜದ ಎಲ್ಲಾ ಬಂಧುಗಳು ಸಹಕರಿಸಿ ಪ್ರೋತ್ಸಾಹಿಸುತ್ತಿರುವುದು ಸಂತೋಷದ ವಿಚಾರ. 

ವೇದಿಕೆಯ ಎಲ್ಲಾ ಕೆಲಸ ಕಾರ್ಯಗಳಿಗೆ ಸಮಾಜದ ಒಗ್ಗಟ್ಟಿನ ಪ್ರತಿಸ್ಪಂದನೆ ಸಿಕ್ಕಿದಾಗ ಮಾತ್ರ ಸಮಾಜದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಮುಂದಿನ 15 ದಿನಗಳಲ್ಲಿ ಮಣಿಪಾಲ ಪರಿಸರದ ಅನಂತನಗರ, ಹುಡ್ಕೋಕಾಲನಿ, ಈಶ್ವರ ನಗರ, ದಶರಥ ನಗರ, ಶಾಂತಿನಗರ ಮತ್ತು ಹತ್ತಿರದ ಇಂದ್ರಾಳಿ ಪರಿಸರದ ಎಲ್ಲಾ 
ಜಿ ಎಸ್ ಬಿ ಸಮಾಜ ಬಾಂಧವರ ಮನೆ ಮನೆಗೆ ತೆರಳಿ ಆಮಂತ್ರಣ ಪತ್ರಿಕೆಯನ್ನು ನೀಡಿ ಆಗಸ್ಟ್ ೦1 ಶನಿವಾರ ನಡೆಯಲಿರುವ 
ಜಿ ಎಸ್ ಬಿ ಸಾಮಾಜಿಕ ಜಾಗೃತಿ ಕಾರ್ಯಗಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ವಿನಂತಿಸಲು ಸ್ವಯಂಸೇವಕರು ಮತ್ತು ಕಾರ್ಯಕರ್ತರ ಯಾದಿಯನ್ನು ತಯಾರಿಸಲಾಯಿತು. 

ವೇದಿಕೆಯಲ್ಲಿ ಮಣಿಪಾಲ ಪರಿಸರದ ಹಿರಿಯ ಸಮಾಜ ಸೇವಕರಾದ "ಅನ್ನಪೂರ್ಣ" ಶ್ರೀ ದೇವೇಂದ್ರ ಪ್ರಭು ರವರು ಉಪಸ್ಥಿತರಿದ್ದರು.

ಶ್ರೀ ನಾಗೇಶ್ ನಾಯಕ್ ರವರು ವಂದನಾರ್ಪಣೆಗೈದರು.

ಮಣಿಪಾಲ, ಪರ್ಕಳ ಮತ್ತು ಉಡುಪಿ ಪರಿಸರದ 55ಕ್ಕೂ ಹೆಚ್ಚು ಮಂದಿ ಸಮಾಜಮುಖಿ ಚಿಂತನೆಯ ಸಮಾನ ಮನಸ್ಕ ಜಿ ಎಸ್ ಬಿ ಸಮಾಜ ಬಾಂಧವರು ಪೂರ್ವಭಾವಿ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ಮತ್ತು ಸಲಹೆ ಸೂಚನೆಗಳನ್ನು ನೀಡಿ ಸಕ್ರಿಯವಾಗಿ ಭಾಗವಹಿಸಿದರು.

Post a Comment

0 Comments