ಅಮೃತ ಮಹೋತ್ಸವ ಸಂಭ್ರಮದ ಲಾಂಛನ ಬಿಡುಗಡೆ

ವಿನಯ್ ಕುಮಾರ್ ಅಧ್ಯಕ್ಷರು ಮತ್ತು ಸವ೯ ಸದಸ್ಯರು

ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಸರ್ವೋದಯ ಫ್ರೆಂಡ್ಸ್ ಬೆದ್ರ

ಅಮೃತ ಮಹೋತ್ಸವ ಸಂಭ್ರಮದ ಲಾಂಛನ ಬಿಡುಗಡೆ 


ಮೂಡುಬಿದಿರೆ: ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ(ರಿ),  ಇದರ ವತಿಯಿಂದ ಅಮೃತ ಮಹೋತ್ಸವ ಸಂಭ್ರಮ–2025 ಲಾಂಛನ ಬಿಡುಗಡೆ ಮತ್ತು “ಬಾಲ ಸಂಸ್ಕಾರ' ವಿಶೇಷ ಕಾರ್ಯಕ್ರಮವು   ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ  ಮಂಗಳವಾರ ಸಂಜೆ ನಡೆಯಿತು.

 ಉದ್ಯಮಿ ನಾರಾಯಣ ಪಿ.ಎಂ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಂಕುಚಿತ ಮನೋಭಾವವನ್ನು ಬಿಟ್ಟು ಎಲ್ಲರೂ ಒಟ್ಟುಗೂಡಿ ಅಮೃತ ಮಹೋತ್ಸವ ಕಾರ್ಯಕ್ರಮ ವನ್ನು ನಡೆಸುವಂತೆ ಮಾರ್ಗದರ್ಶನ ಮಾಡಿದರು.


 ಪ್ರಸೂತಿ ತಜ್ಞ ಡಾ. ರಮೇಶ್ ಅಮೃತ ಮಹೋತ್ಸವ ಲಾಂಛನ ಬಿಡುಗಡೆ ಮಾಡಿ   ಮಾತನಾಡಿ ಸಮಾಜದ  ಕಟ್ಟಕಡೆಯ ವ್ಯಕ್ತಿ ಕೂಡ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ ಎಂದರು. 

   ಮೂಡುಬಿದಿರೆ ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ  ಸುರೇಶ್ ಕೆ ಪೂಜಾರಿ  ಅಧ್ಯಕ್ಷತೆ ವಹಿಸಿದರು.

 ಸ್ಥಾಪಕ ಸದಸ್ಯ  ಪಿ. ಕೆ ರಾಜು ಪೂಜಾರಿ ಬಾಲ ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿದರು.

ಬೆಳ್ತಂಗಡಿ ಗುರುದೇವ ವಿವಿದ್ದೋದ್ದೇಶ  ಸಹಕಾರ ಸಂಘದ ನಿರ್ದೇಶಕ ಜಗದೀಶ್ವಂದ್ರ ಡಿ. ಕೆ,   ಅಧ್ಯಾಪಿಕೆ ಉಷಾ ಮಧುಕರ್, ಸೇವಾದಳದ ಅಧ್ಯಕ್ಷ ದಿನೇಶ್, ಮಹಿಳಾ ಘಟಕದ ಅಧ್ಯಕ್ಷೆ  ಸವಿತಾ ದಿನೇಶ್  ಉಪಸ್ಥಿತರಿದ್ದರು.

  ಕಾರ್ಯದರ್ಶಿ ಗಿರೀಶ್ ಕುಮಾರ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಲಕ್ಷಣ್ ಪೂಜಾರಿ ವಂದಿಸಿದರು. ಶ್ರೀರಾಜ್ ಸನಿಲ್ ಹಾಗೂ ಪ್ರಜ್ವಲ್ ಮಾರ್ನಾಡು ಕಾಯ೯ಕ್ರಮ , ನಿರೂಪಿಸಿದರು.


Post a Comment

0 Comments

Advertisement