ಪ್ರಕಾಶ್ ಜೆ. ಶೆಟ್ಟಿಗಾರ್ ಅವರಿಗೆ 'ಪ್ರೇರಣಾ ಪುರಸ್ಕಾರ್-2023' ಪ್ರದಾನ
ಮೂಡುಬಿದಿರೆ: ಕಳೆದ 7 ವರ್ಷಗಳಿಂದ ವಿಶೇಷ ಚೇತನರಿಗಾಗಿ ಶ್ರಮಿಸುತ್ತಿರುವ ಸಮಾಜ ಸೇವಕ, ಮೂಡುಬಿದಿರೆ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಸ್ಥಾಪಕ ಪ್ರಕಾಶ್ ಜೆ.ಶೆಟ್ಟಿಗಾರ್ ಅವರಿಗೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಎಕ್ಸoಬಾದಲ್ಲಿ ಜ್ಯೋತಿಪ್ರಸಾದ್ ಜೊಲ್ಲೆಯವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಪ್ರೇರಣಾ ಉತ್ಸವದಲ್ಲಿ 'ಪ್ರೇರಣಾ ಪುರಸ್ಕಾರ್ -2023' ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಪುರಸ್ಕಾರವು 51,000/-ರೂ. ನಗದಿನೊಂದಿಗೆ ಸನ್ಮಾನ ಪತ್ರ ಹಾಗೂ ನೆನಪಿನ ಕಾಣಿಕೆಯನ್ನೊಳಗೊಂಡಿತು.
ಚಿಕ್ಕೋಡಿ ಕ್ಷೇತ್ರದ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ, ನಿಪ್ಪಾಣಿ ಕ್ಷೇತ್ರದ ಹಾಲಿ ಶಾಸಕರು, ಮಾಜಿ ಸಚಿವರು ಸ್ಪೆಷಲ್ ಒಲಂಪಿಕ್ಸ್ ಭಾರತ್ ಕರ್ನಾಟಕ ಇದರ ರಾಜ್ಯಾಧ್ಯಕ್ಷೆ ಶಶಿಕಲಾ ಜೊಲ್ಲೆ ಹಾಗೂ ಜೊಲ್ಲೆ ಗ್ರೂಪ್ ಆಫ್ ಇನ್ಸಿಟ್ಯೂಷನ್ ನ ಎಲ್ಲಾ ಆಡಳಿತ ವರ್ಗದವರು ಈ ಸಂದರ್ಭದಲ್ಲಿದ್ದರು.
0 Comments