ಬಕೆಟ್ ಅಲ್ಲ ಟ್ಯಾಂಕರ್ ಹಿಡಿತೇನೆ:ಕಾಂಗ್ರೆಸ್ ಕಾರ್ಯಕರ್ತನ ಕಿವಿಹಿಂಡಿದ ರಕ್ಷಿತ್ ಶೆಟ್ಟಿ
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಜಮೀನು ನೀಡಿದ್ದು ಮುಸ್ಲಿಂ ರಾಜರು ಎಂದಿದ್ದ ಕಾಂಗ್ರೆಸ್ ನಾಯಕ ಮಿಥುನ್ ರೈ ಹೇಳಿಕೆಗೆ ಕೌಂಟರ್ ಕೊಟ್ಟ ರಕ್ಷಿತ್ ಶೆಟ್ಟಿಯವರಿಗೆ ಟ್ವಿಟರ್ ಮೂಲಕವೇ ಕಾಂಗ್ರೆಸ್ ಕಾರ್ಯಕರ್ತ ಪ್ರದೀಪ್ ಶೆಟ್ಟಿ ಬಕೆಟ್ ಹಿಡಿಯಬೇಡಿ ರಕ್ಷಿತ್ ಎಂದು ಕಾಮೆಂಟ್ ಮಾಡಿದ್ದ.
ಈ ಕಾಮೆಂಟ್ ನೋಡಿ ಕೆಂಡಾಮಂಡಲರಾದ ನಟ ರಕ್ಷಿತ್ "ಉಡುಪಿ ನನ್ನ ಜನ್ಮಸ್ಥಳ. ನಾನು ಬಕೆಟ್ ಅಲ್ಲ ಟ್ಯಾಂಕರನ್ನೇ ಹಿಡಿಯುತ್ತೇನೆ" ಎಂದು ಹೇಳುವ ಮೂಲಕ ಚಾಟಿ ಬೀಸಿದ್ದಾರೆ.
ಶ್ರೀ ಕೃಷ್ಣ ಮಠ, ಅನಂತೇಶ್ವರ ದೇಗುಲ ನಂತರ ಚಂದ್ರಮೌಳೀಶ್ವರ ದೇವಸ್ಥಾನದ ಬಗ್ಗೆಯೂ ಕಾಮೆಂಟ್ ಮೂಲಕ ಮಾಹಿತಿ ನೀಡಿದ್ದಾರೆ. ಇದು ಉರಿತ್ತಿರುವ ಬೆಂಕಿಗೆ ತುಪ್ಪ ಹಾಕಿದಂತಾಗಿದ್ದು ಸುಳ್ಳಲ್ಲ.
0 Comments