ಸಚಿವರ ಪ್ರಯತ್ನಕ್ಕೆ ಮುಖ್ಯಮಂತ್ರಿಗಳ ಸಾಥ್:ಕರಾವಳಿ ಜಿಲ್ಲೆಗಳ ಬಹುದಿನಗಳ ಬೇಡಿಕೆಗೆ ಸರ್ಕಾರ ಅಸ್ತು

ಜಾಹೀರಾತು/Advertisment
ಜಾಹೀರಾತು/Advertisment


ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ದೈನಂದಿನ ಆಹಾರವಾಗಿರುವ ಕುಚ್ಚಲಕ್ಕಿಯನ್ನು ರೇಷನ್ ಪಡಿತರ ಚೀಟಿದಾರರಿಗೆ ವಿತರಿಸಬೇಕೆನ್ನುವ ಹಲವಾರು ದಿನಗಳ ಕೂಗಿಗೆ ಈಗ ಸಮ್ಮತಿ ದೊರೆತಿದೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನಿರಂತರ ಸಭೆ, ಅಧ್ಯಯನಶೀಲ ಪ್ರವಾಸ ಹಾಗೂ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಸರ್ಕಾರದ ಗಮನ ಸೆಳೆದ ಶೈಲಿಯು ಈಗ ಯಶಸ್ವಿಯಾಗಿದೆ. ಖುದ್ದು ಸರ್ಕಾರ 132 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ಕುಚ್ಚಲಕ್ಕಿ ವಿತರಿಸುವ ರೈತರಿಗೆ ಘೋಷಿಸಿದ್ದು ಕುಚ್ಚಲಕ್ಕಿ ಹೋರಾಟಕ್ಕೆ ಅತಿ ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ. ಈಗಾಗಲೇ ಕೇಂದ್ರ ಸರ್ಕಾರವು ಭತ್ತಕ್ಕೆ ಕ್ವಿಂಟಾಲ್ ಗೆ 2040 ರೂಪಾಯಿ ನೀಡುತ್ತಿದ್ದು ಇದಕ್ಕೆ ಹೆಚ್ಚುವರಿಯಾಗಿ 500 ರೂಪಾಯಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಹೀಗಾಗಿ ರೈತರ ಮೊಗದಲ್ಲೂ ಸಂತಸ ಮೂಡಿದ್ದು 2540 ರೂಪಾಯಿಗೆ ಭತ್ತ ಮಾರಾಟವಾಗಲಿದೆ. ಈ ಹಿನ್ನೆಲೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಜಿಲ್ಲೆಗಳಿಗೆ ಕುಚ್ಚಲಕ್ಕಿ ವಿತರಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ನಂತರ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಂಗಳಿಗೆ ಒಂದು ಲಕ್ಷ ಕ್ವಿಂಟಾಲ್ ಅಕ್ಕಿಗಳ ಅಗತ್ಯವಿದ್ದು ರೈತರು ನಮಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಕುಚ್ಚಲಕ್ಕಿ ಸಂಸ್ಕರಣಾ ಘಟಕದಲ್ಲಿ ಕುಚ್ಚಲಕ್ಕಿಯನ್ನು ಮಾರಾಟ ಮಾಡುವ ಮೂಲಕ ಸರ್ಕಾರದೊಂದಿಗೆ ರೈತರು ಸ್ಪಂದಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಸುಮಾರು 15 ಕ್ಕಿಂತಲೂ ಅಧಿಕ ಸಭೆಯನ್ನು ನಡೆಸಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೇರಳ ತೆಲಂಗಾಣ ಸಹಿತ ಇತರ ಕಡೆಗಳಲ್ಲಿ ಕುಚ್ಚಲಕ್ಕಿ ಸಮೀಕ್ಷೆ ನಡೆಸಿದ್ದು ಇದರ ಅಧ್ಯಯನವನ್ನು ಕೇಂದ್ರ ಸರ್ಕಾರಕ್ಕೂ ಮುಟ್ಟಿಸಿದ್ದರು. ಇದೀಗ ಸಚಿವರ ಭಗೀರಥ ಪ್ರಯತ್ನದಿಂದ ಮೂರು ಜಿಲ್ಲೆಗಳಿಗೆ ಪಡಿತರದಾರರಿಗೆ ಕುಚ್ಚಲಕ್ಕಿ ದೊರೆತಿರುವುದು ಪಡಿತರ ಫಲಾನುಭವಿಗಳ ಮುಖದಲ್ಲಿ ಸಂತಸ ಮೂಡಿದೆ. 

Post a Comment

0 Comments