ಮೂಡುಬಿದಿರೆ: ಉತ್ತಮ ಗುಣಮಟ್ಟ ಬಟ್ಟೆ, ಗ್ರಾಹಕಸ್ನೇಹಿ ಸೇವೆಯಿಂದ
ಹೆಸರುವಾಸಿಯಾಗಿರುವ ಪ್ರಭಾತ್ ಸಿಲ್ಕ್ಸ್, ಮಹಾನಗರಗಳಲ್ಲಿ ಇರುವ ಬಟ್ಟೆ ಮಳಿಗೆಗಳಿಗೆ ಸರಿಸಮಾನವಾದ ಮಾದರಿಯಲ್ಲಿ ಮೂಡುಬಿದಿರೆಯಲ್ಲಿ ತೆರೆದಿರುವ ಮಳಿಗೆಯು ಅತ್ಯುತ್ತಮವಾಗಿ ರೂಪುಗೊಂಡಿದೆ. ಎಲ್ಲ ವಯೋಮಾನದ ಜನರ ಅಭಿರುಚಿಗೆ ತಕ್ಕಂತಹ ಉಡುಪುಗಳಿವೆ, ಈಗಾಗಲೇ ಗ್ರಾಹಕರ ನೆಚ್ಚಿನ ಮಳಿಗೆಯಾಗಿರುವ ಪ್ರಭಾತ್ ಸಿಲ್ಕ್ಸ್ ಮತ್ತಷ್ಟು ಬೆಳೆಯಲಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಶುಭ ಹಾರೈಸಿದರು.
ಮೂಡುಬಿದಿರೆ ಪೇಟೆಯ ನಾಗರಕಟ್ಟೆ ರಸ್ತೆಯಲ್ಲಿ ನೂತನವಾಗಿ ತೆರೆದಿರುವ ಖ್ಯಾತ ಕಂಪೆನಿಗಳ
ಉತ್ಕೃಷ್ಟ ಗುಣಮಟ್ಟದ ಬೃಹತ್ ಜವುಳಿ ಮಳಿಗೆ ಪ್ರಭಾತ್ ಸಿಲ್ಕ್ಸ್ ಅನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಮಾತನಾಡಿ ವಸ್ತ್ರೋದ್ಯಮವು ಇಂದು ಬೇಡಿಕೆಯ ಕ್ಷೇತ್ರವಾಗಿದ್ದು ಅಧ್ಯಯನ ಭಾಗವೂ ಆಗಿದೆ. ಈ ಉದ್ಯಮಕ್ಕೆ ವಿಫುಲ ಅವಕಾಶಗಳಿವೆ. ಪ್ರಭಾತ್ ಸಿಲ್ಕ್ಸ್ ನವರ ಅನುಭವದ ಗಟ್ಟಿ ನಲೆಯಲ್ಲಿ ರೂಪುಗೊಂಡ ಈ ಉದ್ಯಮವು ಇನ್ನಷ್ಟು ಬಲಿಷ್ಟವಾಗಿ ಬೆಳೆಯಲಿ ಎಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ, ಯಾವುದೇ ಊರಿನಲ್ಲಿ ಹೆಚ್ಚು ಹೆಚ್ಚು ಉದ್ಯಮಗಳು ತೆರೆದಾಗ
ಅವಕಾಶಗಳೂ ಹೆಚ್ಚುತ್ತವೆ. ಗ್ರಾಹಕರು ಹೊಸತನವನ್ನು ಅಪೇಕ್ಷಿಸುತ್ತಾರೆ, ಈ ಮಳಿಗೆಯು ಗ್ರಾಹಕರ ಅಪೇಕ್ಷೆಯನ್ನು ಈಡೇರಿಸಲಿ ಎಂದರು. ಮೂಡುಬಿದಿರೆ ವಲಯ ಕಥೋಲಿಕ್ ಸಭಾದ ಆಧ್ಯಾತ್ಮಿಕ ನಿರ್ದೇಶಕ ರೆ.ಫಾ ದೀಪಕ್ ನೊರೊನ್ಹಾ, ಮಾಡುಬಿದಿರೆ ಬದ್ರಿಯಾ ಟೌನ್ ಜುಮ್ಮಾ ಮಸೀದಿಯ ಖತೀಬ ಉಸ್ಸಾದ್ ಅಬೂಬಕ್ಕರ್ ಸಿದ್ದಿಕ್ ದಾರಿಮಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ, ಉದ್ಯಮಿ ಕೆ.ಶ್ರೀಪತಿ ಭಟ್, ಶ್ರೀಕ್ಷೇತ್ರ ಪಡ್ಯಾರಬೆಟ್ಟು ಆಡಳಿತ ಮೊಕ್ತೇಸರ ಜೀವಂಧರ್ ಕುಮಾರ್, ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಚೌಟರ ಅರಮನೆಯ ಕುಲದೀಪ ಎಂ ಮೂಡುಬಿದಿರೆ ಹನುಮಂತ ಹಾಗೂ ವೆಂಕರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ಎಂ., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ , ಪುರಸಭೆ ಸದಸ್ಯೆ ಶಕುಂತಲಾ ಎಸ್ ದೇವಾಡಿಗ, ಎಸ್.ದೇವರಿಗೆ, ಜಯಶ್ರೀ ಅಮರನಾಥ ಶೆಟ್ಟಿ, ಮಂಜುಳಾ ಅಭಯಚಂದ್ರ ಜೈನ್ ಶುಭ ಹಾರೈಸಿದರು.
ಪ್ರಭಾತ್ ಸಿಲ್ಕ್ಸ್ ನ ಸ್ಥಾಪಕ ಪ್ರಭಾಚಂದ್ರ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ, ೧೯೭೫ರಲ್ಲಿ ಸಣ್ಣ ಮಟ್ಟದಲ್ಲಿ ಪ್ರಾರಂಭಿಸಿದ ಈ ಸಂಸ್ಥೆಯು ಈಗ ಬೃಹತ್ ಮಟ್ಟದಲ್ಲಿ ಬೆಳೆಯಲು ಉತ್ಕೃಷ್ಟ ಮಟ್ಟದ ಸೇವೆ ಮತ್ತು ಗ್ರಾಹಕರು ಇಟ್ಟ, ನಂಬಿಕೆಯೇ ಕಾರಣಾಗಿದೆ. ಇಬ್ಬರು ಪುತ್ರರು ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ ಎಂದರು.
ಕಟ್ಟಡದ ಇಂಜಿನಿಯರ್ ಬೆನ್ನಿ, ಮ್ಯಾಥ್ಯೂ, ಗುತ್ತಿಗೆದಾರ, ಅಬ್ದುಲ್ ರೆಹಮಾನ್ ಹಾಗೂ ಒಳಾಂಗಣ ವಿನ್ಯಾಸಕಾರರನ್ನು, ಸಂಸ್ಥೆಯ ರೂಪದರ್ಶಿ ಪೂಜಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸುನಂದ.ಪಿ ಜೈನ್, ಪೂರ್ಣಚಂದ್ರ ಜೈನ್, ಅಪೇಕ್ಷಾ ಪಿ ಜೈನ್, ಪ್ರತಾಪ್ ಚಂದ್ರ ಜೈನ್, ಐಶ್ವರ್ಯ ಪಿ ಜೈನ್, ಪ್ರಪೂರ್ಣ ಜೈನ್, ಸಂಪೂರ್ಣ ಜೈನ್ ಅತಿಥಿಗಳನ್ನು ಗೌರವಿಸಿದರು. ಪೂರ್ಣಚಂದ್ರ ಜೈನ್ ವಂದಿಸಿದರು. ಅಧ್ಯಾಪಕ ನಿತೇಶ್ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು.
0 Comments