ಪಾರ್ಕ್ ಬಳಿ ಹೆಚ್ಚೇನು ಗೂಡು!?

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ ಪೊಲೀಸ್ ಠಾಣೆ ಬಳಿಯ ಜ್ಯೋತಿನಗರ ಮಹಾತ್ಮಾಗಾಂಧಿ ಪಾರ್ಕ್‌ ನಲ್ಲಿ ಹೆಚ್ಚೇನು ಗೂಡು ಕಟ್ಟಿದ್ದು ಜನ ಆತಂಕಕ್ಕೆ ಒಳಗಾಗಿದ್ದಾರೆ. ಈ ಪಾರ್ಕ್‌ ನಲ್ಲಿ ಹೆಚ್ಚು ಜನರು ವಾಕಿಂಗ್ ಮಾಡಲು ಬರುತ್ತಾರೆ.ಶಾಲಾ ಕಾಲೇಜು ಮಕ್ಕಳು ನಡೆದಾಡುತ್ತಾರೆ. ಇದೀಗ ಪಾರ್ಕ್‌ ನಲ್ಲಿ ಹೆಚ್ಚೇನು ಗೂಡು ಕಟ್ಟಿದ್ದು ಅಪಾಯಕಾರಿಯಾಗಿ ಪರಿಣಮಿಸಿದೆ. ಹೆಚ್ಚೇನು ಅಪಾಯಕಾರಿಯಾಗಿದ್ದು ಸ್ಥಳೀಯಾಡಳಿತ ಪೂರಕ ಕ್ರಮ ತೆಗೆದುಕೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Post a Comment

0 Comments