ಕಡಂದಲೆ ಪಾಲಡ್ಕದಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ, ಗ್ರಾಮಸ್ಥರ ವಿಶೇಷ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಂಡ ಪಂಚಾಯತ್

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ : ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆಯಲ್ಲಿ 400/221ಕೆವಿ ವಿದ್ಯುತ್‌ ಉಪಕೇಂದ್ರ ನಿರ್ಮಿಸುವ ಕಾಮಗಾರಿ ಮತ್ತು ಕಡಂದಲೆ ಕಲ್ಲೋಯ ಸರಹದ್ದಿನಲ್ಲಿ ಹಾದು ಹೋಗಿರುವ ೪೦೦ ಕೆ.ವಿ.ಯಪಿಸಿಎಲ್ -ಶಾಂತಿಗ್ರಾಮ ದ್ವಿಪ್ರಸರಣ ಮಾರ್ಗದಿಂದ ಕಡಂದಲೆಯಲ್ಲಿ 400/೩320 ಕೆ.ವಿ. ವಿದ್ಯುತ್‌ ಉಪಕೇಂದ್ರಕ್ಕೆ ೪೦೦ ಕೆ.ವಿ. ಬಹುಮಂಡಲ ವಿದ್ಯುತ್‌ ಪ್ರಸರಣ ಮಾರ್ಗ ನಿರ್ಮಾಣ ಮೊದಲಾದ ಕಾಮಗಾರಿಗಳಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪಾಲಡ್ಕ ಪೂಪಾಡಿಕಲ್ಲು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಮಂಗಳವಾರ ನಡೆದ ಪಾಲಡ್ಕ ಗ್ರಾ.ಪಂ. ವಿಶೇಷ ಗ್ರಾಮಸಭೆಯಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಗ್ರಾಮಸ್ಥರ ವಿರೋಧವಿದೆ ಎಂದು ಪಂಚಾಯತ್ ನಿರ್ಣಯ ದಾಖಲಿಸಿದೆ. 

ಕೆಪಿಸಿಎಲ್ ಕಾ.ನಿ ಎಂಜಿನಿಯರ್ ಅಧಿಕಾರಿ ಗಂಗಾಧರ ಅವರು ಯೋಜನೆಯ ಬಗ್ಗೆ, ಸಂತ್ರಸ್ತರಿಗೆ ನೀಡಲಾಗುವ ಪರಿಹಾರ ಧನದ ಬಗ್ಗೆ ವಿವರಣೆ ನೀಡಿ ಈ ಯೋಜನೆಯನ್ನು ಇತರ ವಿದ್ಯುತ್ ಉತ್ಪಾದನ ಘಟಕಗಳಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ದ.ಕ. ಉಡುಪಿ ಜಿಲ್ಲೆಗಳ ಬೇಡಿಕೆಗನುಸಾರವಾಗಿ ಪೂರೈಕೆ ಮಾಡಲು ಬೇಕಾದ ವಿದ್ಯುತ್‌ ಅದನ್ನು ಬಲವರ್ಧಿಸಲು ಕೈಗೆತ್ತಿಕೊಂಡಿದ್ದು ಯಾವುದೇ ರೀತಿಯ ವಿದ್ಯುತ್‌ ಉತ್ಪಾದನೆ ಇಲ್ಲ ನಡೆಯುವುದಿಲ್ಲ ಈ ಉಪಕೇಂದ್ರ ಮತ್ತು ಪ್ರಸರಣ ಮಾರ್ಗದಿಂದ ಯಾವುದೇ ವಾಯುಮಾಲಿನ್ಯ ವಾತಾವರಣ ದಲ್ಲಿ ಉಷ್ಣತೆ ಹೆಚ್ಚಳ, ಯುವರಾಜನ ಸಹಿತ ಪರಿಸರ ಮಾಲಿನ್ಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಈ ಸಂದರ್ಭ ಗ್ರಾಮಸ್ಥರು ಮಾತನಾಡಿ ಟೆಂಡರ್‌ ಕರೆದ ಬಳಿಕ ಸಭೆ ಏಕೆ ಕರೆದದ್ದು ಎಂದು ಪ್ರಶ್ನಿಸಿದರು. ಶಾಸಕ ಉಮಾನಾಥ ಕೋಟ್ಯಾನ್‌ ಕೂಡ ಅಧಿಕಾರಿಯನ್ನು ಈ ಬಗ್ಗೆ ಜನರಿಗೆ ಸ್ಪಷ್ಟವಾಗಿ ಮುಂಚಿತವಾಗಿ ಮಾಹಿತಿ ಏಕೆ ನೀಡಿಲ್ಲ ಎಂದು ವಿಚಾರಿಸಿದಾಗ ಅಧಿಕಾರಿ ಸಮರ್ಪಕ ಉತ್ತರ ನೀಡದೆ ಮೌನ ವಹಿಸಿದರು. ಆದರೆ, ಅವರು ಇಲ್ಲ ಕೃಷಿಕರಿದ್ದಾರೆ, ಮನೆಗಳಿವೆ ಆದ್ದರಿಂದ ಈ ಯೋಜನೆ ತಮಗೆ ಬೇಡವೇ ಬೇಡ ಎಂದು ತಮ್ಮ ವಿರೋಧವನ್ನು ಒಕ್ಕೊರಲಿನಿಂದ ವ್ಯಕ್ತಪಡಿಸಿದರು.


ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ ಜನಪರವಾದ ಯೋಜನೆಗಳು ಜನರಿಗೆ ಯೋಜನೆಯ ಬಗ್ಗೆ ಸಮರ್ಪಕ ಮಾಹಿತಿ ನೀಡಬೇಕಾಗಿತ್ತು ಯಾವ ಸರಕಾರ ಬಂದರೂ ಅಭಿವೃದ್ಧಿ ಕಾರ್ಯ ನಡೆಸಲು ಮುಂದಾಗುವುದು ಸಹಜವೇ ಯಾರೂ ಅಪಪ್ರಚಾರ ಮಾಡಬೇಡಿ. ಇದರಲ್ಲಿ ಪಕ್ಷ ರಾಜಕೀಯ ಇಲ್ಲ. ಏನಿದ್ದರೂ ಯೋಜನೆಯ ಬಗ್ಗೆ ಇಂಧನ ಸಚಿವ ಸುನಿಲ್ ಕುಮಾರರ ಗಮನ ಸೆಳೆದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ಕೆ.ಪಿ. ಸಂತೋಷ್ ಶೆಟ್ಟಿ ಮಾತನಾಡಿ, ಸರಕಾರದ ಅಂಗವೇ ಆಗಿರುವ ಅರಣ್ಯ ಇಲಾಖೆ ಕೆಪಿಎಸಿಎಲ್‌ಗೆ ಆಕ್ಷೇಪ ಮಾಡುತ್ತದೆ, ಮುಗ್ಧ ರೈತರನ್ನು ಹೇಳದೆ, ಕೇಳದೆ ಕೃಷಿ ಭೂಮಿಯ ಮೇಲೆ ಲೈನ್ ಎಳೆಯುತ್ತದೆ, ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು. ಯಾವುದು ಎಂಬುದು ಗೊತ್ತಾಗದೆ ಸಮಸ್ಯೆ ಆಗಿದೆ, ಯಾವುದೇ ಕೃಷಿ ಅಥವಾ ಇತರ ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿಲ್ಲ ಎಂದರು. ವಿಕ್ಟರ್ ಕಡಂದಲೆ ಮಾತನಾಡಿ,ಕಾಂತಾವರದ ಬಳಿ ಉಪಕೇಂದ್ರ ನಿರ್ಮಿಸಲು ಸಾಕಷ್ಟು ಸರಕಾರಿ ಜಾಗ ಇದೆ, ಆದ ನ್ನೇ ಬಳಸಿ ಮತ್ತು ಹಾಸನದ ಶಾಂತಿಗ್ರಾಮದತ್ತ ಸಾಗಿರುವ ಲೆನ್‌ನ್ನೇ ಉನ್ನತೀಕರಿಸಿ ಕೆಪಿಸಿಎಲ್‌ ತಮ್ಮ ಪ್ರಕರಣ ವರ್ಗವನ್ನು ಸಾಗಿಸಬಹುದಲ್ಲ ಎಂದು ಪ್ರಶ್ನಿಸಿದರು. ಪ್ರಮುಖರಾದ ಟಿ. ಎನ್, ಕಂಬಾರ ಅವರು ಇಲ್ಲ ಇಂಥ ಕಾಮಗಾರಿ ಆಗುವುದೇ ಬೇಡ. ಎಂದು ಆಗ್ರಹಿಸಿದರು.


ಘನತ್ಯಾಜ್ಯ ಘಟಕ ಆಗುವಲ್ಲಿ ಕೆಪಿಸಿಎಲ್‌ನವರು ಅಧಿಕಾರಿಗಳ ವಸತಿ ನಿರ್ಮಿಸುತ್ತಾರೆ. ಇಲ್ಲಿನ ಐದು ಸೆಂಟ್ಸ್ ನವರನ್ನು ಬೆಳ್ತಂಗಡಿಗೆ ಸಂಚರಿಸುತ್ತಾರೆ. ಎಂಬಿತ್ಯಾದಿ ಅಪಪ್ರಚಾರ ಮಾಡಲಾಗುತ್ತಿರುವುದು ಸಲ್ಲದು. ಯೋಜನೆಯಿಂದ ಕೆಲವರನ್ನು ಹೊರತು ಪಡಿಸಿ ಕೃಷಿಗೆ ತೊಂದರೆ ಆಗುವುದಿಲ್ಲ.. ಇಲ್ಲ ಘಟಕವಾದರೆ, ಕಡಂದಲೆ ಬಲ್ಲಾಡಿಯಲ್ಲಿ ಕೈಗಾರಿಕಾ ವಲಯ ನಿರ್ಮಿಸಿ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಿರುವುದನ್ನು ಗಮನಿಸಬೇಕಾಗಿದೆ, ನನ್ನದೂ ಒಂದು ಎಕ್ರೆ ಜಾಗ ಹೋಗುತ್ತದೆ 

ಏನಿದ್ದರೂ ತಾನು ಗ್ರಾಮಸ್ಥರ ಜತೆಗಿರುವೆ ಎಂದ ಗ್ರಾಮಸ್ಥ, ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಮನವರಿಕೆ ಮಾಡಲು ಪ್ರಯತ್ನಿಸಿದರು.

ಪಂಚಾಯತ್ ಅಧ್ಯಕ್ಷ ದಿನೇಶ್‌ ಕಾಂಗ್ಲಾಯ, ಉಪಾಧ್ಯಕ್ಷ ಸುಕೇಶ ಶೆಟ್ಟಿ, ಕೆ.ಪಿಎಸಿಎ‌ ಸ.ಕಾ.ನಿ. ಎಂಜಿನಿಯರ್ ಶ್ರೀಕಾಂತ್ ಆಚಾರ್, ಗ್ರಾ. ಪಂ ಮಾಜಿ ಸದಸ್ಯೆ ಸುನೀತಾ ಎಸ್. ಶೆಟ್ಟಿ, ಪಂ. ಸದಸ್ಯರು, ಗ್ರಾಮಕರಣಿಕ ಶ್ರೀನಿವಾಸ ಉಪಸ್ಥಿತರಿದ್ದರು. 

ಪಿಡಿಓ ರಕ್ಷಿತಾ ಕಾರ್ಯಕ್ರಮ ನಿರೂಪಿಸಿ, ನಿರ್ಣಯ ಮಂಡಿಸಿ, ವಂದಿಸಿದರು.

Post a Comment

0 Comments