ಶಾಸಕ ಹರೀಶ್ ಪೂಂಜ ಹಲ್ಲೆ ಯತ್ನಕ್ಕೆ -ಶಾಸಕ ಉಮಾನಾಥ ಕೋಟ್ಯಾನ್ ಖಂಡನೆ

ಜಾಹೀರಾತು/Advertisment
ಜಾಹೀರಾತು/Advertisment

 

ಮೂಡುಬಿದಿರೆ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಮೇಲೆ ನಿನ್ನೆ ತಡರಾತ್ರಿ ಕೆಲವು ಕಿಡಿಗೇಡಿಗಳು  ಹಲ್ಲೆ ನಡೆಸಲು ಯತ್ನಿಸಿರುವುದನ್ನು ಮೂಡುಬಿದಿರೆ ಶಾಸಕ ಉಮಾನಾಥ್ ಎ.ಕೋಟ್ಯಾನ್ ಖಂಡಿಸಿದ್ದಾರೆ. 

ತತ್ವ ಸಿದ್ಧಾಂತಗಳ ವಿಚಾರದಲ್ಲಿ ವಿರೋಧವಿದ್ದರೆ ಅದನ್ನು ವೈಚಾರಿಕ ನೆಲೆಯಲ್ಲಿ ವಿರೋಧಿಸಬೇಕೇ ವಿನಃ ಇಂತಹ ದುಷ್ಕೃತ್ಯಗಳಿಂದಲ್ಲ. ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಜನಪ್ರತಿನಿಧಿಯ ಮೇಲೆ ಇಂತಹ ಕೃತ್ಯಗಳು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಈ ಕೃತ್ಯಗಳನ್ನೆಸಗಿದ ದುಷ್ಕರ್ಮಿಗಳ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಅವರು ರಾಜ್ಯದ ಗೃಹ ಸಚಿವ ಅರಗಜ್ಞಾನೇಂದ್ರರನ್ನು ಒತ್ತಾಯಿಸಿದ್ದಾರೆ.

Post a Comment

0 Comments