ಬ್ರೇಕಿಂಗ್:ಉತ್ತರ ಪ್ರದೇಶ ವಾರಣಾಸಿ ಮಸೀದಿ ವಿವಾದ:ತೀರ್ಪು ಪ್ರಕಟ

ಜಾಹೀರಾತು/Advertisment
ಜಾಹೀರಾತು/Advertisment

ವಾರಾಣಸಿ ಜ್ನಾನವ್ಯಾಪಿ ಮಸೀದಿಯಲ್ಲಿ ಹಿಂದೂ ದೇವರ ಪೂಜೆಗೆ ಅವಕಾಶ ನೀಡಬೇಕೆಂಬ ಹಿಂದೂಗಳ ಮನವಿಯ ಅರ್ಜಿಯ ವಿಚಾರಣೆಗೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ.

ಕಾಶಿ ವಿಶ್ವನಾಥ ದೇಗುಲದ ಸಮೀಪದಲ್ಲಿರುವ ಜ್ಞಾನವ್ಯಾಪಿ ಮಸೀದಿಯಲ್ಲಿ ಹಿಂದುಗಳ ಪೂಜ್ಯನೀಯ ದೇವರಾದ ಶೃಂಗಾರ ಗೌರಿಯ ಆಲಯವಿದೆ. ಈ ಆಲಯಗಳಿಗೆ ಪೂಜೆ ಮಾಡಲು ಅವಕಾಶ ನೀಡಬೇಕೆಂದು ಆರು ಮಹಿಳೆಯರು ವಾರಣಾಸಿ ಕೋರ್ಟ್ ಮೆಟ್ಟಿಲೇರಿದ್ದು ಇಂದು ಮಹಿಳೆಯರಿಗೆ ಮೊದಲ ಜಯ ದೊರೆತಂತಾಗಿದೆ. ಹಿಂದೂಗಳ ಅರ್ಜಿಯನ್ನು ತಿರಸ್ಕರಿಸಬೇಕು ಎಂಬ ಮುಸ್ಲಿಂ ಒಕ್ಕೂಟದ ಅರ್ಜಿಯನ್ನು ತಿರಸ್ಕರಿಸಿದ ವಾರಣಾಸಿ ನ್ಯಾಯಾಲಯವು ಹಿಂದೂಗಳಿಗೆ ಪೂಜೆ ಮಾಡುವ ಹಕ್ಕನ್ನು ನ್ಯಾಯಾಲಯದಿಂದ ಕೇಳುವ ಹಕ್ಕು ಇದೆ ಎಂದು ಪ್ರತಿಪಾದಿಸಿದೆ. ಈ ಮೂಲಕ ಮುಸ್ಲಿಂ ಒಕ್ಕೂಟಗಳ ಅರ್ಜಿಯನ್ನು ತಿರಸ್ಕರಿಸಿ ಹಿಂದೂಗಳ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸೆಪ್ಟೆಂಬರ್ 22 ರಿಂದಲೇ ಈ ಬಗ್ಗೆ ತನಿಖೆ ಮತ್ತು ವಿಚಾರಣೆ ಆರಂಭಿಸುವ ಬಗ್ಗೆ ನ್ಯಾಯಾಲಯವು ಸ್ಪಷ್ಟನೆ ನೀಡಿದೆ. ಮಸೀದಿ ಒಳಗಿನ ಶೃಂಗಾರ ಗೌರಿಯ ಪೂಜೆಗೆ ಅವಕಾಶ ನೀಡುವ ಕುರಿತಾದ ಅನೇಕ ವರ್ಷಗಳ ಹೋರಾಟಕ್ಕೆ ಹಿಂದುಗಳಿಗೆ ಮೊದಲ ಜಯ ಸಿಕ್ಕಂತಾಗಿದೆ.

 

Post a Comment

0 Comments