19ನೇ ರಾಜ್ಯಮಟ್ಟದ ಕರಾಟೆ ಸ್ಪರ್ಧೆಆತ್ಮರಕ್ಷಣೆ, ಆರೋಗ್ಯಪೂರ್ಣ ಬದುಕಿಗೆ ಕರಾಟೆ ಪೂರಕ – ಉಮಾನಾಥ ಕೋಟ್ಯಾನ್


ಜಾಹೀರಾತು/Advertisment
ಜಾಹೀರಾತು/Advertisment

ಮೂಡುಬಿದಿರೆ : ಕರಾಟೆಯು ಆತ್ಮರಕ್ಷಣೆಯ ಕಲೆಯಾಗಿದೆ. ದೈಹಿಕ ಮತ್ತು ಮಾನಸಿಕವಾಗಿ ನಮ್ಮನ್ನು ಬಲಗೊಳಿಸುವ ಈ ಕಲೆಯನ್ನು ಎಲ್ಲಾ ಶಾಲೆಗಳಲ್ಲಿಯೂ ತರಗತಿಗಳು ನಡೆಯಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. 

ಅವರು ಶೂರಿನ ರಿಯೂ ಕರಾಟೆ ಅಸೋಸಿಯೇಶನ್ ಸಂಯೋಜನೆಯಲ್ಲಿ ಎಂ.ಕೆ. 

ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜು, ಸ್ವಾಮೀಸ್ ಸ್ಟ್ರೆಂಥ್ ಸೆಂಟರ್ ಸಹಯೋಗದಲ್ಲಿ ಸಮಾಜಮಂದಿರದಲ್ಲಿ ಶನಿವಾರ ನಡೆದ 19ನೇ ರಾಜ್ಯಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಶಿಪ್‌ನ್ನು ಉದ್ಘಾಟಿಸಿ ಮಾತನಾಡಿದರು.

ಪುರಸಭಾಧ್ಯಕ್ಷ ಪ್ರಸಾದ್‌ ಕುವಾರ್‌ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉದ್ಯಮಿ ಅಬುಲ್ ಆಲಾ ಮುತ್ತಿಗೆ, ರೋಟರಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಪ್ರವೀಣ್‌ಚಂದ್ರ ಜೈನ್‌ ಮಾತನಾಡಿ ಶುಭ ಹಾರೈಸಿದರು. ಅತಿಥಿಗಳಾಗಿ ಉದ್ಯಮಿಗಳಾದ ಸಿ.ಎಡ್ ಅಬ್ದುಲ್ ಗಫೂರ್, ಮಹಮ್ಮದ್ ಶರೀಫ್, ಪ್ರೆಸ್‌ ಕ್ಲಬ್ ನ ಮಾಜಿ ಅಧ್ಯಕ್ಷ  ಜಿ. ಸೀತಾರಾಮ ಆಚಾರ್ಯ ಭಾಗವಹಿಸಿದರು. ವೇದಿಕೆಯಲ್ಲಿ ಶೂರಿನ್ ರಿಯೂ ಕರಾಟೆ ಅಸೋಸಿಯೇಶನ್‌ನ ಮುಖ್ಯ ಶಿಕ್ಷಕ ಮಹಮ್ಮದ್ ನದೀಂ, ಸ್ವಾಮೀಸ್ ಸ್ಟೆಂಡ್‌ ಟ್ರೈನಿಂಗ್‌ನ ಸ್ವಾಮಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಎಂtry.ಕೆ. ಅನಂತ್ರಾಜ್‌ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಧನಂಜಯ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಕ ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯದ ವಿವಿಧ ವಿಭಾಗಗಳಂದ ೬೦೦ಕ್ಕೂ ಅಧಿಕ ಕರಾಟೆಪಟುಗಳು ಭಾಗವಹಿಸಿದ್ದರು.

Post a Comment

0 Comments