ರೂ. 1 ಕೋಟಿ ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಶಿಲಾನ್ಯಾಸ

ಜಾಹೀರಾತು/Advertisment
ಜಾಹೀರಾತು/Advertisment

 

ಬೆಳ್ತಂಗಡಿ: ತಾಲೂಕಿನ ನವನಿರ್ಮಾನದ ಹರಿಕಾರ ಹರೀಶ್ ಪೂಂಜ ಮಾರ್ಗದರ್ಶನದಲ್ಲಿ ಪೂವಳ - ಕೊಂದಳ ಸಂಪರ್ಕಿಸುವ ರೂ.1 ಕೋಟಿ  ವೆಚ್ಚದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿನ ಶಿಲಾನ್ಯಾಸ ಕಾರ್ಯಕ್ರಮವನ್ನು ಆದಿತ್ಯವಾರದಂದು ಊರಿನ ಹಿರಿಯ ಕಾರ್ಯಕರ್ತ ಧರ್ನಪ್ಪ ಶೆಟ್ಟಿ ನೆರವೇರಿಸಿದರು.

ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಮಾತನಾಡಿ, ಕಳೆದ 3 ವರ್ಷಗಳಿಂದ ಆರಂಬೋಡಿ ಗ್ರಾಮ ಪಂಚಾಯತಿಗೆ ಶಾಸಕರು ಸುಮಾರು ರೂ.15 ಕೋಟಿಗಿಂತಲೂ ಅಧಿಕ ಅನುದಾನವನ್ನು ನೀಡಿದ್ದಾರೆ. ಶಾಸಕರು ಅನ್ನುವ ಕಲ್ಪನೆಯನ್ನು ಮೀರಿ ಜನಪ್ರತಿನಿಧಿಗಳ ಪರ ಕೆಲಸ ಮಾಡುತ್ತಿದ್ದಾರೆ. ಕೇವಲ ರಸ್ತೆ, ಸೇತುವೆಗೆ‌ ಮಾತ್ರ ಅನುದಾನ ನೀಡದೆ, ಶಿಕ್ಷಣ, ವಿದ್ಯುತ್ ಸಮಸ್ಯೆಗಳ ಸಮಸ್ಯೆಗೂ ಹೆಚ್ಚು ಒತ್ತು ನೀಡಿದ್ದಾರೆ. ರಾಜಕೀಯ ವೈಮನಸ್ಸನ್ನು ಬಿಟ್ಟು, ಕೇವಲ ಅಭಿವೃದ್ಧಿ ಪಥದತ್ತ ಯೋಚಿಸಿದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಗ್ರಾ.ಪಂ. ಅಧ್ಯಕ್ಷೆ ವಿಜಯ ರಮೇಶ್ ಕುಂಜಾಡಿ, ಸದಸ್ಯರಾದ ಪ್ರಭಾಕರ್ ಹುಲಿಮೇರು, ಸತೀಶ್ ಪಿ. ಮಠ, ಶಕ್ತಿ ಕೇಂದ್ರದ ಅಧ್ಯಕ್ಷೆ ಆಶಾ‌ ಎಸ್.ಶೆಟ್ಟಿ, ರೋಟರಿ ಕ್ಲಬ್‌ ಅಧ್ಯಕ್ಷ ರಾಘವೇಂದ್ರ ಭಟ್, ಗುತ್ತಿಗೆದಾರ ಸುನೀತ್ ಹೆಗ್ಡೆ, ವಕೀಲ ಸುರೇಶ್ ಶೆಟ್ಟಿ, ಯುವ ಉದ್ಯಮಿ ಕಿರಣ್ ಮಂಜಿಲ,  ಹಿರಿಯ ಕಾರ್ಯಕರ್ತ ಪಾಂಡುರಂಗ ಶೆಟ್ಟಿಗಾರ್, ರಾಮಾಂಜನೇಯ ಫ್ರೆಂಡ್ಸ್ ಬಳಗ ಹಾಗೂ ಊರಿನ ಸಮಸ್ತರು ಪಾಲ್ಗೊಂಡಿದ್ದರು.

ಉಮೇಶ್ ಶೆಟ್ಟಿ ಆರಂಬೋಡಿ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments