ಮೂಡುಬಿದಿರೆ : ಗುಡ್ಡ ಕುಸಿದು ಮನೆಗಳಿಗೆ ಹಾನಿ-
ಸಂತ್ರಸ್ತ ಕುಟುಂಬಗಳ ಸ್ಥಳಾಂತರ, ತಹಶೀಲ್ದಾರ್ ಭೇಟಿ
ಮೂಡುಬಿದಿರೆ : ತಾಲೂಕಿನಾದ್ಯಂತ ಭಾನುವಾರ ಹಾಗೂ ಸೋಮವಾರ ಸುರಿದ ಭಾರಿ ಮಳೆಗೆ ಗುಡ್ಡ ಕುಸಿದು, ಮನೆಗಳಿಗೆ ಹಾನಿಯಾಗಿದ್ದು ತಹಶೀಲ್ದಾರ್ ಶ್ರೀಧರ್ ಮುಂದಲಮನಿ, ತಾಲೂಕು ಕಾಯ೯ನಿವ೯ಹಣಾಧಿಕಾರಿ ಕುಸುಮಾಧರ, ಪಿಡಿಒ ಭೀಮ ಬಿ. ನಾಯಕ ಹಾಗೂ ವಿ.ಎ ಗಾಯತ್ರಿ ಅವರು ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪುತ್ತಿಗೆ ಗ್ರಾಮದ ಹಂಡೇಲಿನಲ್ಲಿ ಗುಡ್ಡ ಕುಸಿದು ಅಮೀರ್ ಅಬ್ದುಲ್ ರೆಹ್ಮಾನ್ ಅವರ ಮನೆ ಭಾಗಶಃ ಬಿರುಕು ಬಿಟ್ಟಿದೆ. ಹುಸೈನ್ ಮನೆಗೂ ಹಾನಿಯಾಗಿದೆ. ಸಮೀಪದ ಮುಂಡೇಲಿನಲ್ಲೂ ಗುಡ್ಡ ಕುಸಿದಿದೆ. ಸಂತ್ರಸ್ತರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳ್ಳಲು ಪಿಡಿಒ ಸೂಚಿಸಿದಾಗ ತಾವು ಸಂಬಂಧಿಕರ ಮನೆಯಲಿ ಆಶ್ರಯ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಬೆಳುವಾಯಿ ಗ್ರಾಮದ ಸ್ವಾಮಿ ಪಾದೆ ಭಾಸ್ಕರ ಅವರ ಮನೆಯು ಗಾಳಿಮಳೆಗೆ ಹಾನಿಗೊಳಗಾಗಿದ್ದು, ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದು ಬೆಳುವಾಯಿ ಗ್ರಾ. ಪಂ. ಅಧ್ಯಕ್ಷ ಸುರೇಶ್ ಗೋಲಾರ ಭೇಟಿ ನೀಡಿದ್ದಾರೆ. ಮಾರೂರು ಹೊಸಂಗಡಿ ಕಂದೀರು ಬಳಿಯ ಪಲ್ಗುಣಿ ನದಿಯಲ್ಲಿ ನೀರು ತುಂಬಿ ಹರಿಯುತ್ತಿದ್ದು, ಕಿಂಡಿ ಆಣೆಕಟ್ಟು ಗೇಟು ತೆರೆಯುವ ಕಾರ್ಯಾಚರಣೆ ನಡೆಯುತ್ತಿದೆ.
0 Comments