ಮೆಸ್ಕಾಂ ಇಲಾಖೆಯ ನಿಲ೯ಕ್ಷ್ಯಕ್ಕೆ ಬಲಿಯಾದ ಮಹಿಳೆ *ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ರೂ 5ಲಕ್ಷ ಪರಿಹಾರ

ಜಾಹೀರಾತು/Advertisment
ಜಾಹೀರಾತು/Advertisment

 ಮೆಸ್ಕಾಂ ಇಲಾಖೆಯ ನಿಲ೯ಕ್ಷ್ಯಕ್ಕೆ ಬಲಿಯಾದ ಮಹಿಳೆ

*ಅಧಿಕಾರಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ರೂ 5ಲಕ್ಷ ಪರಿಹಾರ

ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾ. ಪಂ. ವ್ಯಾಪ್ತಿಯ

 ಹೊಸಮಾರಪದವಿನ ಬಂಗಾರುಗುಡ್ಡೆ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.


  ಲಿಲ್ಲಿ ಡಿ'ಸೋಜಾ (64 ವ) ಮೃತಪಟ್ಟ ಮಹಿಳೆ.  ತಮ್ಮ ಮನೆಯ ಮೇಲ್ಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಯು ಬೆಳಿಗ್ಗೆ ತುಂಡಾಗಿ  ಬಚ್ಚಲು ಮನೆಯ ಹಿಂಭಾಗಕ್ಕೆ ಬಿದ್ದಿದ್ದು ಅದನ್ನು ಗಮನಿಸದೆ ಲಿಲ್ಲಿ ಅವರು ತಂತಿಯ ಮೇಲೆ ಕಾಲನ್ನಿಟ್ಟಿದ್ದಾರೆ ಆಗ ವಿದ್ಯುತ್ ಹರಿದು ಮೃತಪಟ್ಟಿದ್ದಾರೆ. ಲಿಲ್ಲಿ ಅವರು ಪುತ್ರ ನೋಮ೯ನ್ ಡಿ'ಸೋಜನೊಂದಿಗೆ ಮನೆಯಲ್ಲಿದ್ದರು.

ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು : ವಿದ್ಯುತ್ ತಂತಿ ಅಪಾಯದಲ್ಲಿರುವ ಬಗ್ಗೆ ಲಿಲ್ಲಿ ಅವರ ಮನೆಯವರು ಸೋಮವಾರದಂದು ಮೆಸ್ಕಾಂ ಇಲಾಖೆಗೆ ತಿಳಿಸಿದ್ದರು ಆದರೆ ಇದೇ ಗ್ರಾಮದ ಇನ್ನೊಂದು ಕಡೆಯಲ್ಲಿ ಸಮಸ್ಯೆ ಇದ್ದುದರಿಂದ ಲೈನ್ ಮೆನ್ ಗಳು ಅಲ್ಲಿಗೆ ತೆರಳಿದ್ದರು ಆದ್ದರಿಂದ ಇಲ್ಲಿ ಸರಿಪಡಿಸಿರಲಿಲ್ಲ ಇದರ ಪರಿಣಾಮವಾಗಿ ಅನಾಹುತವೊಂದು ಸಂಭವಿಸಿಯಾಗಿದೆ. ಈ ಸಂದಭ೯ ಸ್ಥಳಕ್ಕಾಗಮಿಸಿದ ಮೆಸ್ಕಾಂನ ಸಹಾಯಕ ಕಾಯ೯ನಿವಾ೯ಹಕ ಅಭಿಯಂತರ ಮೋಹನ್  ಮತ್ತು ಶಾಖಾಧಿಕಾರಿ ಪ್ರವೀಣ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ರೂ 25 ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿದಾಗ ರೂ 5 ಲಕ್ಷ ಪರಿಹಾರ ನೀಡುವ ಭರವಸೆ ನೀಡಿದರು.

 

 ತಾಲೂಕು ತಹಸೀಲ್ದಾರ್ ಶ್ರೀಧರ ಮುಂದಲಮನಿ,ಶಾಸಕ ಉಮಾನಾಥ ಎ. ಕೋಟ್ಯಾನ್, ಪಂಚಾಯತ್ ಉಪಾಧ್ಯಕ್ಷ ವಲೇರಿಯನ್ ಕುಟಿನ್ಹಾ, ಸದಸ್ಯರಾದ ನಾಗೇಶ್ ಅಮೀನ್, ನವೀನ್ ಪೂಜಾರಿ ತಿಟ್ಟುಬೆಟ್ಟು, ಜಯಶಂಕರ್, ಕೆಡಿಪಿ ಸದಸ್ಯ  ಪ್ರವೀಣ್ ಪೂಜಾರಿ, ಕಂದಾಯ ನಿರೀಕ್ಷಕ ಮಂಜುನಾಥ್, ಪಿಡಿಒ ಶೇಖರ್, ಗ್ರಾಮಕರಣಿಕೆ ದೀಪ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

_--------------------

 ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಆದಷ್ಟು ಬೇಗ ಸರಿಪಡಿಸಬೇಕು, ಜೋತು ಬಿದ್ದಿರುವ ತಂತಿಗಳನ್ನು ಬದಲಾಯಿಸಬೇಕೆಂದು ಮೆಸ್ಕಾಂ ಇಲಾಖೆಗೆ ಸೂಚಿಸಿದ ಶಾಸಕ ಉಮಾನಾಥ ಕೋಟ್ಯಾನ್ ಅವರು ಹೆಚ್ಚಿನ ಪರಿಹಾರವನ್ನು ನೀಡುವಂತೆ ಇಲಾಖೆಯ ಮೇಲಾಧಿಕಾರಿಗಳ ಬಳಿ ಮಾತನಾಡುವುದಾಗಿ ತಿಳಿಸಿದರು.

------=------=

Post a Comment

0 Comments