ಮೂಡುಬಿದಿರೆ : ತಾಲೂಕಿನ ಅಭಿವೃದ್ಧಿಗಾಗಿ ಸಿಪಿ(ಐ)ಎಂ ಪಕ್ಷದ ವತಿಯಿಂದ ಸಾಮೂಹಿಕ ಹಕ್ಕೋತ್ತಾಯ ಸಭೆಯು ಆಡಳಿತ ಸೌಧದ ಮುಂಭಾಗ ಸೋಮವಾರ ನಡೆಯಿತು.
ಸಿಪಿಐ (ಎಂ) ಪಕ್ಷದ ಜಿಲ್ಲಾ ಕಾಯ೯ದಶಿ೯ ಯಾದವ ಶೆಟ್ಟಿ ಸಭೆಯನ್ನುದ್ದೇಶಿ ಮಾತನಾಡಿ ಜಾಗತಿಕ ಉದಾರೀಕರಣ ನೀತಿ ತಂದ ಬಳಿಕ ಬಡವ ಶ್ರೀಮಂತರ ನಡುವಿನ ಅಂತರ ಹೆಚ್ಚಾಯಿತು ಹಾಗೂ ಮೋದಿ ಅಧಿಕಾರ ವಹಿಸಿಕೊಂಡ ಬಳಿಕ ಈ ನೀತಿ ಅತೀ ವೇಗವಾಗಿ ಮುಂದುವರೆದು ಎಲ್ಲಾ ಸಂಪತ್ತನ್ನು ಅಂಬಾನಿ ಅದಾನಿಗೆ ನೀಡಿದ್ದು ಇದರಿಂದಾಗಿ ಜನ ಸಾಮಾನ್ಯರು ಅತೀ ಹೆಚ್ವಿನ ಸಮಸ್ಯೆಗಳನ್ನು ಅನುಭವಿಸುವಂತ್ತಾಗಿದೆ ಎಂದರು.
ತಾಲೂಕಿನ ಆಸ್ಪತ್ರೆಗೆ ಓರ್ವ ಉತ್ತಮ ವೈದ್ಯನನ್ನು ನೀಡಲು ಶಾಸಕರಿಗೆ ಸಾಧ್ಯವಾಗಿಲ್ಲ,
ತಾಲೂಕಿನ ಎಲ್ಲಾ ಪಂಚಾಯತ್ ಗಳಲ್ಲಿ ನಿವೇಶನ ರಹಿತರ ಪಟ್ಟಿ ಪಂಚಾಯತ್ ಗಳಲ್ಲಿ ಕೊಳೆಯುತ್ತಿದೆ. 94ಸಿ 94ಸಿಸಿ ಅಕ್ರಮ ಸಕ್ರಮಗಳಲ್ಲಿ ತಾಲೂಕಿನಲ್ಲಿ ಸಾವಿರಾರು ಅರ್ಜಿಗಳು ಕೊಳೆಯುತ್ತಿವೆ 94ಸಿಯಲ್ಲಿ 12 ಸೆನ್ಸ್ ನಿವೇಸನ ನೀಡವೇಕೆಂದು ಕಾನೂನು ಇರುವಾಗ 5 ಸೆನ್ಸ್ ನಿವೇಶನ ನೀಡಿ ದ್ರೋಹವೆಸಲಾಗಿದೆ ಎಂದು ಆರೋಪಿಸಿದರು.
ಬ್ಯಾಂಕಿನಲ್ಲಿ ಬಡವರು ಹಣ ಇಡುತ್ತಾರೆ ಆದರೆ ಅದನ್ನು ಶ್ರೀಮಂತರಿಗೆ ಸಾಲ ನೀಡುತ್ತಿದ್ದಾರೆ. ಬಡವರಿಗೆ ಬ್ಯಾಂಕ್ಗಳು ಸಾಲ ನೀಡುತ್ತಿಲ್ಲ. ಅವರು ಮಿನಿ ಫೈನಾಲ್ಸ್ ಗಳಿಂದ ತೆಗೆದುಕೊಳ್ಳುತ್ತಿದ್ದಾರೆ
ಬ್ಯಾಂಕರ್ ಗಳ ಸಭೆಯನ್ನು ಕರೆಯುವಂತೆ ತಹಶೀಲ್ದಾರ್ ಗೆ ಹೇಳುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಹಣವಂತರಿಗೆ ಮಾತ್ರ ಉದ್ಯೋಗ, ಶಿಕ್ಷಣ,ಆರೋಗ್ಯ ವಾಗಿದೆ.
ಕೊರಗ ಸಮುದಾಯದವರ ಬಳಿ ಹೋಗಿ ಅವರನ್ನು ವಿಚಾರಿಸಬೇಕೆಂದು ಸರಕಾರ ಹೇಳುತ್ತದೆ ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲವೆಂದು ಆರೋಪಿಸಿದರು.
ಸಿಪಿಐ(ಎಂ) ಪಕ್ಷದ ಬೆಳ್ತಂಗಡಿ ಕಾರ್ಯದಶಿ೯ ಬಿ.ಎಂ.ಭಟ್ ಮಾತನಾಡಿ ರಾಮರಾಜ್ಯದ ಕನಸನ್ನು ಕಾಣುತ್ತಿದ್ದೇವೆ ಆದರೆ ಅದು ಮೂಡುಬಿದಿರೆಯಲ್ಲೂ ಇಲ್ಲ ದೇಶದಲ್ಲೂ ಇಲ್ಲ.
ಜನರ ಜೀವ ತೆಗೆಯುತ್ತಿದ್ದೀರಿ ಹಾಗಾಗಿ ನಿಮಗಿಂತ ದೊಡ್ಡ ಭಯೋತ್ಪಾಕರು ಯಾರೂ ಇಲ್ಲ ಎಂದರು.
ಸಿಪಿಐಎಂ ಮುಖಂಡರಾದ ವಸಂತ ಆಚಾರಿ ಸಮಾರೋಪ ಭಾಷಣ ಮಾಡಿ ಶ್ರೀಮಂತರಿರುವಲ್ಲಿ ಒಳಚರಂಡಿ ವ್ಯವಸ್ಥೆ ಮಾಡುತ್ತಾರೆ ಆದರೆ ಬಡವರ ಪ್ರದೇಶಗಳಲ್ಲಿ ಇನ್ನೂ ಆಗುತ್ತಿಲ್ಲ. ಭಯೋತ್ಪಾದಕ ದಾಳಿಯಲ್ಲಿ ಮೃತರಾದ 28 ಜನರ ಮರಣವು ಮುಂದಿನ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆಯಾಗಲಿದೆ. 2 ಸಾವಿರಕ್ಕೆ ಮರಳು ನೀಡುತ್ತೇವೆ ಎಂದು ಹೇಳಿದ್ದ ನಳಿನ್ ಕುಮಾರ್ ಕಟಿಲ್ ನಾಪತ್ತೆಯಾಗಿದ್ದು, ಮರಳು ಕದ್ದು ಮಾರಾಟ ಮಾಡುತ್ತಿನಿರ್ಮಾಣ ಎಂದು ಲೇವಡಿ ಮಾಡಿದ ಅವರು ಶಾಸಕರೇ ಸಾರ್ವಜನಿಕ ಪ್ರದೇಶಗಳಲ್ಲಿ ಶೌಚಾಲಯ, ಮಾರುಕಟ್ಟೆ ನಿರ್ಮಾಣ ಮಾಡಿ
ಎಂದರು.
ಹಕ್ಕೋತ್ತಾಯದ ಮನವಿಯನ್ನು ತಾಲೂಕು ತಹಶೀಲ್ದಾರ್ ಶ್ರೀಧರ ಮುಂದಲಮನಿ ಅವರಿಗೆ ಸಲ್ಲಿಸಲಾಯಿತು.
ಬಿಸಿಯೂಟ ನೌಕರರ ಸಂಘದ ಕಾಯ೯ದರ್ಶಿ ಗಿರಿಜಾ, ಕಟ್ಟಡ ಕಾಮಿ೯ಕರ ಸಂಘದ ಶಂಕರ್ ವಾಲ್ಪಾಡಿ ಉಪಸ್ಥಿತರಿದ್ದರು.
ಪುತ್ತಿಗೆ ಗ್ರಾಪಂ ಅಧ್ಯಕ್ಷೆ ರಾಧಾ ಸ್ವಾಗತಿಸಿದರು. ಸಿಪಿಎಂ ಮೂಡುಬಿದಿರೆ ಕಾರ್ಯದರ್ಶಿ ರಮಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಯಾಝ್ ಕಾಯ೯ಕ್ರಮ ನಿರೂಪಿಸಿದರು.ಸುಂದರ್ ಶೆಟ್ಟಿ ವಂದಿಸಿದರು.
0 Comments