ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ
ಮೂಡುಬಿದಿರೆ: ಜೀವನದಲ್ಲಿ ಎಲ್ಲವೂ ಯಶಸ್ವಿ ಆಗಬೇಕಾಗಿಲ್ಲ ಸೋಲನ್ನೂ ಧೈರ್ಯದಿಂದ ಎದುರಿಸುವ ಛಲವನ್ನು ಬೆಳಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು.
ವಿದ್ಯಾಗಿರಿಯ ಮುಂಡ್ರೆದೆಗುತ್ತು ಕೆ. ಅಮರನಾಥ ಶೆಟ್ಟಿ - ಕೃಷಿ ಸಿರಿ ವೇದಿಕೆಯಲ್ಲಿ ಆಳ್ವಾಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಪಠ್ಯಕ್ರಮದಡಿಯ ಆಳ್ವಾಸ್ ಶಾಲೆಯಲ್ಲಿ 1800 ವಿದ್ಯಾರ್ಥಿಗಳು ಕಲಿಯುತ್ತಿರುವುದು ನಮ್ಮ ಗುಣಮಟ್ಟವನ್ನು ತಿಳಿಸುತ್ತದೆ. ವಿದ್ಯಾರ್ಥಿಗಳ ಸಾಧನೆಯೇ ಆಳ್ವಾಸ್ನ ಸಾಧನೆ ಎಂದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮಾತನಾಡಿ, ಆಳ್ವಾಸ್ ವಿದ್ಯಾರ್ಥಿಗಳ ಬಹುಭಾಷಾ ಅಭಿವೃದ್ಧಿಗೆ ಪೂರಕವಾದ ವಾತವರಣವನ್ನು ಶಾಲೆಯ ಆವರಣದಲ್ಲಿ ಬಹುಮುಖಿ ಆಯಾಮದಲ್ಲಿ ಸೃಷ್ಠಿಲಾಗಿದೆ. ಇದು ವಿದ್ಯಾರ್ಥಿಗಳ ಬೌದ್ಧಿಕ, ಸಾಮಾಜಿಕ, ಭಾವನಾತ್ಮಕ ಸಾಮರ್ಥ್ಯಗಳ ವೃದ್ಧಿಗೆ ಸಹಕಾರಿಯಾಗಿದೆ. ಮಕ್ಕಳಲ್ಲಿ ಇರುವ ಸಾಮಾಜಿಕ ಬದ್ಧತೆಯು ಕೇವಲ ಶಾಲೆಗೆ ಸೀಮಿತವಾಗಿರದೆ ಭವಿಷ್ಯದಲ್ಲೂ ಮುಂದುವರಿಯಬೇಕು ಎಂದರು.
ಆಡಳಿತಾಧಿಕಾರಿ ಪ್ರೀತಂ ಕುಂದರ್, ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿಜಯ ಟಿ. ಮೂರ್ತಿ, ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಉಮಾ ರುಫೂಸ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಂಜಿಕಾ ರೈ ಉಪಸ್ತಿತರಿದ್ದರು.
ಅನ್ನಪೂರ್ಣ ಸ್ವಾಗತಿಸಿ, ಗೌತಮ್ ರೆಡ್ಡಿ ವಂದಿಸಿ, ಸುಪ್ರಿತ್ರಾಜ್ ಸಜ್ಜನ್ ಹಾಗೂ ಮನಸ್ವಿ ನಿರೂಪಿಸಿದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
0 Comments