ಮೂಡುಬಿದಿರೆಯ ಜೋಡು ,ಬಯಲು ಕೋಟಿ -ಚೆನ್ನಯ ಕಂಬಳ ವೀಕ್ಷಿಸಿದ : ಸಿಎಂ ಬಸವರಾಜ್ ಬೊಮ್ಮಾಯಿ

ಜಾಹೀರಾತು/Advertisment
ಜಾಹೀರಾತು/Advertisment

 ಮೂಡುಬಿದಿರೆ: ಕಂಬಳವು ಜಗತ್ಪ್ರಸಿದ್ಧವಾದ ಕ್ರೀಡೆ. ನಮ್ಮ ಸಂಸ್ಕ್ರತಿ, ಸಾಹಿತ್ಯ, ಸಂಗೀತ ಹಾಗೂ ಶಿಲ್ಪಕಲೆಯಿಂದ ಹೇಗೆ ಗುರುತಿಸುತ್ತದೋ ಅದೇ ರೀತಿಯಲ್ಲಿ ಕಂಬಳದ ಓಟದಿಂದ ಕರಾವಳಿಯ ಸಂಸ್ಕ್ರತಿ  ಕ್ರೀಡೆಯು ಗ್ರಾಮೀಣ ಸೊಗಡಿನ ಸಂಸ್ಕೃತಿಯು  ಕಂಬಳದ ಮುಖೇನ ಪ್ರಸಿದ್ಧಿಯನ್ನು  ಪಡೆದಿದೆ ಎಂದರು.ಎಂದು

 ಕಂಬಳದಲ್ಲಿ ಕೋಣಗಳನ್ನು ನಿಯಂತ್ರಿಸುವ ಶೌರ್ಯ, ಶಕ್ತಿ, ಕಲೆ, ಏಕಾಗ್ರತೆಯಿಂದ  ಕಂಬಳವು ತನ್ನದೇ ಆದ ಛಾಪನ್ನು ಮೂಡಿಸಿದೆ ಎಂದ ಅವರು  ಮುಂದೊಂದು ದಿನ ಭಾರತದ ಎಲ್ಲಾ ರಾಜ್ಯಗಳಲ್ಲಿ ಕಂಬಳ ನಡೆಯಲಿದ್ದು, ವಿದೇಶಗಳಲ್ಲಿಯೂ ಕಂಬಳ ನಡೆಯುವ ದಿನಗಳು ಬರಲಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಶಾಸಕ ಉಮಾನಾಥ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ, ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ನಡೆಯುತ್ತಿರುವ ೨೦ ನೇ ವರ್ಷದ ಮೂಡುಬಿದಿರೆಯ ಪ್ರತಿಷ್ಠಿತ ಹೊನಲು ಬೆಳಕಿನ ಕೋಟಿ-ಚೆನ್ನಯ ಕಂಬಳದಲ್ಲಿ ಭಾನುವಾರ ಭಾಗವಹಿಸಿ ಸುಶಾಸನ ದಿನಾಚರಣೆಯ ಅಂಗವಾಗಿ ವಾಜಿಪೇಯಿ ಅವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಸಲ್ಲಿಸಿ  ಮಾತನಾಡಿದರು.

  ಕಂಬಳದಲ್ಲಿ ಕೋಣಗಳನ್ನು ಓಡಿಸಲು ಶಕ್ತಿಗಿಂತ ಬುದ್ಧಿಶಕ್ತಿಯೂ ಬೇಕು ಮತ್ತು ಹೊಂದಾಣಿಕೆ ಮತ್ತು ನಿಯಂತ್ರಿಸುವ  ಮಾಡುವ ಕಲೆ ಗೊತ್ತಿದ್ದರೆ ಮಾತ್ರ ವಿಜೇತರಾಗುತ್ತಾರೆ ಎಂದ ಅವರು ಪಾರಂಪರಿಕವಾದ  ಕಂಬಳ ಕ್ರೀಡೆಯು ಸೂರ್ಯಚಂದ್ರರಿರುವ ತನಕ ಸದಾ ನಡೆಯುತ್ತಿರಲಿ ಎಂದು ಶುಭ ಹಾರೈಸಿದರು.

ತದ ನಂತರ ಕಂಬಳವನ್ನು ವೀಕ್ಷಿಸಿದ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ಸಂದರ್ಭ ಕಂಬಳ ಸಮಿತಿಯ ವತಿಯಿಂದ ಮುಖ್ಯ ಮಂತ್ರಿ ಅವರನ್ನು ಸನ್ಮಾನಿಸಲಾಯಿತು.

ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಸಚಿವರಾದ  ಸಿ.ಟಿ.ರವಿಕುಮಾರ್,  ಶಿಕ್ಷಣ ಸಚಿವ ನಾಗೇಶ್,ನಾರಾಯಣಗೌಡ, ಜಿಲ್ಲಾಧಿಕಾರಿ ರವಿ ಕುಮಾರ್, ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ನಾಗರಾಜ ಪೂಜಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಕೆ., ವಲಯಾರಣ್ಯಾಧಿಕಾರಿ ಹೇಮಗಿರಿ ಅಂಗಡಿ, ಪೊಲೀಸ್ ವರಿಷ್ಠಾಧಿಕಾರಿ, ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಗುಣಪಾಲ ಕಡಂಬ, ಭಾಸ್ಕರ್ ಎಸ್.ಕೋಟ್ಯಾನ್ ಈ ಸಂದರ್ಭದಲ್ಲಿದ್ದರು.

Post a Comment

0 Comments